ಪುಟಗಳು

ಬುಧವಾರ, ಡಿಸೆಂಬರ್ 22, 2010

ಬ್ಯಾಟ


ಅದೆಸ್ಟೋ ದಿನಗಳಾಗಿದ್ದವು ನಾನು ಮಲಗದೇ ನನ್ನ ದೇವರ ಜೋತೆ ಪ್ರಪಂಚವನ್ನೇ ಸುತ್ತುತಿದ್ದ ನನಗೆ ಸಂತೋಷ ನಿರಾಸೆಗಳ ಜೀವನ .....ಏನೋ ಒಂದು ಸಾದಿಸಿದ್ದೇನೆ ಎನ್ನುವ ಸಂತೋಷ .....ಕ್ರಿಕೆಟ್ ಜಗತ್ತಿನ ದೇವ ನನನ್ನು ಇಷ್ಟ ಪಟ್ಟಕೂಡಲೇ ನನ್ನ ಶೋಕೇಸಿನ ಗೆಳೆಯರೆಲ್ಲ ನೀನು ತುಂಬಾ ಲಕ್ಕಿ ಎಂದು ಹೊಗಳಿದ್ದರು ....ಅ ಮಾತು ಸುಳ್ಳಾಗಿಲ್ಲವಲ್ಲ...ಹ್ಮಂ ನಿಜವಾಗಿ ನಾನು ತುಂಬಾ ಪುಣ್ಯವಂತ.....ನನ್ನನು ಮೊದಲ ಸಲ ನೋಡಿದ ಕೆಲ ಸಹ ಆಟಗಾರರು ಏನಿದು ಇಸ್ಟೊಂದು ಬಾರವಾಗಿದೆ ಇದ್ರಲ್ಲಿ ಕ್ರಿಕೆಟ್ ಆಡಿದರೆ ಅಸ್ಟೆ ಎಂದು ನನ್ನ ಯಜಮಾನನಿಗೆ ಹಂಗಿಸುತ್ತ ಇದ್ದರು ...ಆದರೆ ಅವುಗಳಿಗೆಲ್ಲ ತಲೆ ಕೆಡಿಸಿದ ಅವರು ನನ್ನು ಪ್ರೀತಿಯಿಂದ ನೋಡುತಿದ್ದರು ಅಸ್ಟೆ .....ಸದಾ ಅವರ ಅಂತಪುರದೊಳಗೆ ಇರುತಿದ್ದ ನಾನು ಮತ್ತು ನನ್ನ ಸ್ನೇಹಿತರ ನಡುವೆ ಮಾತಿನ ಚಕಮಕಿ ನೆಡಯುತಿತ್ತು....ಅವರ ಹದಿನಾರರ ಆಟದಲ್ಲಿ ಬಳಸುತಿದ್ದವನೊಬ್ಬ ಸದಾ ಅವರ ಬಾಲ್ಯದ ದಿನಗಳ ಕತೆಗಳನ್ನು ನಮಗೆಲ್ಲ ಹೇಳುತಿದ್ದ .....ಅವರ ಸ್ನೇಹಿತ ಕಪ್ಪು ಹುಡುಗನ ಕತೆ ನನ್ನಲ್ಲಿ ವಿಷಾದದ ಅಲೆಯನ್ನು ಹುಟ್ಟು ಹಾಕಿತು .......ನನಗಿನ್ನೂ ನೆನಪಿದೆ ದೇವರು ಪ್ರೀತಿಸುತಿದ್ದ ಹುಡುಗಿಯೋಬಳನ್ನು ಮದುವೆಯಾದ ಸಮಯ ನಮಗೆಲ್ಲ ಖುಷಿಯೋ ಖುಷಿ .....ಪ್ರೀತಿಗೆ ವಯಸ್ಸಿನ ಅಂತರವಿಲ್ಲ ಎನ್ನುವುದನ್ನು ಜಗತ್ತಿಗೆ ತೋರಿಸಿಕೊಟ್ಟವರು ನನ್ನ ಒಡೆಯ ....ಭಗವಂತ ಗಣೇಶ ಮತ್ತು ಬಾರತಂಬೆಯನ್ನು ಅತಿಯಾಗಿ ಪ್ರೀತಿಸುತಿದ್ದ ಅರಾದಿಸಿದವರು........

ನನ್ನ ದೇವರ ಅರಮನೆಯಲ್ಲಿ ನೆಮ್ಮದಿಯಿಂದ ಕಾಲ ಕಳೆಯುತಿದ್ದ ನನಗೆ ಅಗ್ನಿ ಪರೀಕ್ಷೆಯಾ ಕಾಲ ಬಂದೆ ಬಿಟ್ಟಿತ್ತು ......ಆ ದಿನ ಬಾರತ ಮತ್ತು ಅದರ ಪಕ್ಕದ ದೇಶವಾದ ಪಾಕಿಸ್ಥಾನದ ನಡುವಿನ ವಿಶ್ವಕಪ್ ಪಂದ್ಯವಾಗಿತ್ತು ಕ್ರೀಡಾ ಮೈದಾನದ ಸುತ್ತ ನಾನೆಲ್ಲೂ ಕಂಡಿರದ ಜನ ಚಿರಾಟದಲ್ಲಿ ತಲ್ಲಿನರಾಗಿದ್ದರು ......ಪಾಕಿಸ್ತಾನದ ಮೊದಲು ಬ್ಯಾಟ ಮಾಡಿತ್ತು ಮತ್ತದೇ ಬ್ರಹತ್ ಮೊತ್ತವನ್ನು ಬಾರತಕ್ಕೆ ಸವಾಲಾಗಿ ನೀಡಿತ್ತು ....ಅ ದಿನ ನೇರವಾಗಿ ನನ್ನ ಬಳಿ ಬಂದು ನನ್ನನ್ನು ಎತ್ತಿ ಕೊಂಡು ಒಂದು ಕ್ಷಣ ನನ್ನನು ದಿಟ್ಟಿಸಿದ ಅವರ ನೋಟ ನನ್ನಲ್ಲಿ ಹೆದರಿಕೆಯನ್ನು ತಂದಿತ್ತು ...ಹೇಗೆ ಮರೆಯಲಿ ಅ ಸವಾಲಿನ ಪಂದ್ಯ ನನ್ನೊಂದಿಗೆ ಅಂಕಣಕ್ಕಿಳಿದ ಕ್ರಿಕೆಟ್ ದೇವನಿಗೆ ಅದ್ಬುತ ಸ್ವಾಗಾತವನ್ನು ಪ್ರೇಕ್ಷಕರು ನೀಡಿದರು .ಆ ಸಮಯ ನನಗನ್ನಿಸಿದ್ದು ಇಸ್ಟೇ ಇವರ ಬಳಿ ಇರುವ ನಾನೇ ದನ್ಯ.....ಅವರ ಸ್ನೇಹಿತ ಗಂಗೂಲಿ ನನ್ನನ್ನು ನೋಡಿ ಕೇಳಿದರು ...ಮತ್ತದೇ ನಗು ಅವರಿಂದ ಹೊಮ್ಮಿತ್ತು ....

ಪಂದ್ಯ ಅರಂಬವಾದ ಕೆಲೆವೆ ಕ್ಷಣಗಳಲ್ಲಿ ದಾಳಿಗಿಳಿದ ಎಸೆತಗಾರನೊಬ್ಬ ಕ್ರೂರ ರಾಕ್ಸಸನಂತೆ ಕಂಡು ಬಂದ ...ಅವನ ಎಸೆತವೊಂದು ನನ್ನ ದೇವರ ತಲೆಯ ಮೇಲಿಂದ ಹಾಯ್ದು ಹೋಗಿತ್ತು ಅವನಿಗೆ ಬೆಂಬಲಿಸುತಿದ್ದ ಮತೊಬ್ಬ ಅವನನ್ನು ಎಂದು ಕರೆದಾಗ ಹೋ ಇವನ ಅ ರಾವಲ್ಪಿಂಡಿ EXPRESS ಎನ್ನುವುದನ್ನು ಖಚಿತ ಪಡಿಸಿಕೊಂಡೆ ....ಅದಾಗಿ ಎರಡನೆಯ ಎಸೆತವನ್ನು ಬಲವಾಗಿ ಸಿಮಾ ರೇಖೆಯ ಹೊರಕ್ಕೆ ತಳ್ಳಿ ಬಿಟ್ಟೆ ...ಮತ್ತೆ ನನ್ನನ್ನು ಅಭಿಮಾನದಿಂದ ನೋಡಿದ ದೇವರು ವೆರಿ ಗುಡ್ ಎಂದು ನನ್ನ ಬುಜವನ್ನು ಸವರಿದರು

ಟೀಂ ವಿಜಯದ ಹೊಸ್ತಿಲಿನಲ್ಲಿರುವಾಗಲೇ ಇನ್ನೇನು ಶತಕದ ಗಡಿ ದಾಟಿಸುತ್ತರೆಂಬ ಆಸೆಯಿಂದ ಕುಣಿದು ಕುಪ್ಪಳಿಸಿದೆ ಮತ್ತದೇ ದಾಳಿಗಿಳಿದ ರಾಕ್ಷಸ ನನಗರಿವಿಲ್ಲದಂತ ಬಾಲನ್ನು ಎಸೆದು ನನ್ನ ಆಸೆಗೆ ತನ್ನಿರೆರಚಿ ಬಿಟ್ಟ ...ಮತ್ತೆ ಗೆಲುವಿಗೆ ಕೆಲವೇ ರನ್ನುಗಳನ್ನು ಹೊಡೆದು ಪೂರೈಸಿದ ಆಟಗಾರರು ತಂಡವನ್ನು ಗೆಲುವಿನ ನಗು ಬೀರಲು ಸಹಕರಿಸಿದರು ....ಅ ಪಂದ್ಯದಲ್ಲಿ ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಸ್ವಿಕರಿಸಿದ ನನ್ನ ದೇವ ನನ್ನ ಬಳಿ ಬಂದು ಹೆಯ್ಯ್ ಬ್ಯಾಡ್ ಲಕ್ ಕಾಣೋ ಎಂದು ನನಗೆ ಮುತ್ತಿಟ್ಟ ಕ್ಷಣ ನಾನು ರೋಮಂಚಿತಾನಗಿ ಅವರ ಗೆಲುವಿನ ನಗುವನ್ನು ಕಾಣುತ್ತ ಕುಳಿತು ಬಿಟ್ಟೆ

೧೯೯೬ ರ ಇಸವಿಯಲ್ಲಿ ನನ್ನ ಹತ್ತರ ಒಂದು ಒಳ್ಳೆ ಕುಕ್ಕಿನ ಬೆಳದ್ದ ಕೋಳಿ ಇದ್ದಿತ್ತು ..ಆದರೆ ಏನು ಮಾಡ್ಲಿ ಅದೊಂದು ಅಮವಾಸೆ ಪಡೆಯಲ್ಲಿ ಕೋಳಿ ವಿರವೆಶವಾಗಿ ಹೋರಾಡಿ ಮರಣ ಹೊಂದಿತ್ತು ಇ ಲೈಫ್ ಇಸ್ಟೇ ಅಲ್ವಾ

ಭಾನುವಾರ, ಡಿಸೆಂಬರ್ 12, 2010



ಮತ್ತದೇ ಸೂರ್ಯ ಹುಟ್ಟುತಾನೆ ಅದೇ ರಾತ್ರಿ ಅದೇ ಮುಂಜಾನೆ .....ನೋವು ನಿರಾಶೆ ಉತ್ಸಹಾ ಪ್ರಿತಿಗಳೆಲ್ಲವೂ ಇ ಕಳೆದ ಹಳೆಯ ವರುಷದ ನೆನಪುಗಳಸ್ತೆ .....ನೋಡುನೋಡುತಿದ್ದಂತೆ ಮರೆಯಾಗುವ ಸಂಜೆಯಾ ನೆಸರನಂತೆ ಕಳೆದ ವರುಶವೊಂದು ಕಳೆದು ಬಿಟ್ಟಿದೆ .....ಮತ್ತಿಪ್ಪೖದರಲ್ಲಿ ಐದರ ನೆನಪುಗಳು ಕಾಡುತ್ತವೆ



ಬಿಟ್ಟಿರಲಾಗದ ಪ್ರೀತಿ,ಆ ಶಾಲಾ ದಿನಗಳು ...ಇರುವೆಗಳಂತೆ ಸದಾ ಚಟುವಟಿಕೆಯಿಂದಿರುವ ಅ ಸಮಯಗಳು ....ನಮ್ಮನ್ನು ಪ್ರಿತಿಸುತಿದ್ದ ಹೊಗಳುತಿದ್ದ ನಮ್ಮೊಂದಿಗೆ ಸ್ನೇಹಿತನಾಗುತಿದ್ದ ಮಾಸ್ತರ ಪಾಠ ಗಳನಸ್ತೆ ಚೆನ್ನಾಗಿ ಓದುತಿದ್ದ ಶಾಲಾ ದಿನಗಳು……



ಪಕ್ಕದ ಮನೆಯ ಗಿಡ ಕದ್ದು ಶಾಲೆಯಲ್ಲಿ ನೆಟ್ಟು ವನಮೊತ್ಶವ ಮಾಡಿದ್ದು ,ನಾನು ನನ್ನ ಸ್ನೇಹಿತರು ಸೇರಿ ಕದಿಯುತಿದ್ದ ಕರಗುಂಜಿ ,ಹಲಸಿನ ಹಣ್ಣು ನಾವೆಲ್ಲರೂ ಮಾಡುತಿದ್ದ ಹತ್ತು ಹಲವಾರು ತರಲೆಗಳು ........ಮಧ್ಯಾನದ ಸುಡು ಬಿಸಿಲೆನ್ನದೆ ಆಡುತಿದ್ದ ಕ್ರಿಕೆಟ್ ಆಟ ..ಸಂಜೆತನಕ ಕೆರೆಯಲ್ಲಿ ಇಜಾಡಿ ಗಾಳದಲ್ಲಿ ಮೀನು ಹಿಡಿಯ್ತಿದ್ದ ಅ ಹೊಳೆ ....ಪಕ್ಕದ ಇಟ್ಟಿಗೆ ಕಾರ್ಖಾನೆಯಿಂದ ಇಟ್ಟಿಗೆ ಕದ್ದು ಮಾಡಿದ ಮುರಡಿಯ ರಾಮ ಮಂದಿರ.....ಎಲ್ಲವು ಕಳೆದ ಹೋದ ವರುಷಗಳ ಪುಟದೊಳಗೆ .......

ಮತ್ತೆ ಮುಂಜಾನೆಯ ನಾಲ್ಕಕ್ಕೆದ್ದು ಹೊಲ ಉಳಿ ...ಬೆಳಗಿನ ತಿಂಡಿ ತಿಂದು ಕಾಲೇಜಿನ uniform ದರಸಿ… ಮತ್ತೆ ಮತ್ತೆ ಕನ್ನಡಿಯಲ್ಲಿ ಮುಖ ನೋಡಿ ತೀಡಿ ತಿದ್ದಿ ಬಾಚುತಿದ್ದ ತಲೆಕೂದಲು ...ಹೀರೋ ಎಂದು ನಾಮಕಿತಗೊಂಡ ನನ್ನ ಮುದ್ದಿನ ಸೈಕಲ್ ಏರಿ ಹೋಗುವ ನನ್ನ ಜಾಪು ....ಮತ್ತಲ್ಲಿ ಮುಂದಿನ ಬೆಂಚಿನ ಹುಡುಗಿಯ ಚೆಂದ ......Wow…ಅ ದಿನಗಳ ಮಜಾವೇ ಬೇರೆಯಾಗಿರುತ್ತಿತ್ತು



ಹೇಳುತ್ತಾ ಹೋದರೆ ಇನ್ನಸ್ಟು ಇದೆ ...ಮನಸುಗಳು ಮತ್ತದೇ ನೆನಪುಗಳ ನಡುವೆ ಸುತ್ತಿ ಗಿರಕೆ ಹೊಡಯುತ್ತದೆ...ಮತ್ತಿನೆರಡು ದಿನಗಳಲ್ಲಿ ಇ ವರುಷವು ಜಾರಿ ಹೋಗಲಿದೆ ....ಕ್ರಿಕೆಟ್ ದೇವ ಸಚ್ಚಿನ್ ಹೊಡೆದ ದ್ವಿಶತಕ ....ಚಿನ್ನದ ಹುಡುಗಿ ಅಶ್ವಿನಿ ಗೆದ್ದ ಮೂರು ದಾಖಲೆಯ ಪದಕಗಳು....ನಿತ್ತ್ಯನಂದ,ಕಲ್ಮಾಡಿ ,ಯಡಿಯೂರಪ್ಪನಂಥ ಕಳ್ಳ ಮುಖಗಳ ಪರಿಚಯ ......ಹಾಕಿಯಲ್ಲಿ ವಿರಾವೆಶ ಪ್ರರ್ದಶನ ತೋರಿ ಕೊನೆಯ ಹಂತದಲ್ಲಿ ಸೋತು ಕ್ರೀಡಾಂಗಣದಲ್ಲಿ ಕಣ್ಣಿರಿತ್ತ ನಮ್ಮ ಮಹಿಳ ಹಾಕಿ ತಂಡದ ಸೋಲು,ರಾಜೀವ್ ದೀಕ್ಷಿತರ ನಿಧನದ ನೋವು ನಮ್ಮ ಮನಸಿನ ಮೂಲೆಗಳಲ್ಲಿ ........hmm ಇ ಮನಸೇ ಹೀಗೆ ಮತ್ತೆ ಮತ್ತೆ ಕಳೆದು ಹೋದ ದಿನಗಳನ್ನು ಮೆಲಕು ಹಾಕುತ್ತವೆ ........



ಹೀಗೆ ಹತ್ತು ಹಲವು ಮಜಲುಗಲೊಡನೆ ಸಾಗುವ ನಮ್ಮೆಲ್ಲರ ದಿನಗಳು ಒಂದು ದಿನದ ಸೂರ್ಯಸ್ತದಂತೆ ನಿದಾನವಾಗಿ ಮರೆಯಾಗುತ್ತದೆ ....ನಾವೆಲ್ಲೋ ಇ ಗಾಳಿಯ ದೂಳಿನೊಡನೆ ಸೇರುತ್ತೇವೆ ..........ಮತ್ತೆ ಹೊಸ ಕನಸುಗಳೊಂದಿಗೆ ಹೊಸ ಹೆಜ್ಜೆಗಳೊಂದಿಗೆ ಹೊಸ ದಿನಗಳಿಗಾಗಿ ಕಾದಿರುತ್ತೇನೆ……….jpg

ಮಂಗಳವಾರ, ನವೆಂಬರ್ 30, 2010

ಬಾಲ ಕಾರ್ಮಿಕನ ಸ್ವಗತ---ವಾಣಿ ಶೆಟ್ಟಿ




ಬಾಲ ಕಾರ್ಮಿಕನ ಸ್ವಗತ!

ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ

ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ

ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ?

ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!



ಎಲ್ಲೆಯಿಲ್ಲದ ಬಾನ ಕಾಮನಬಿಲ್ಲೇ,ಕೆಳಗಿಳಿಯಬೇಡ ಅಲ್ಲೇ ಇರು

ಬಂದರೆ ನನ್ನಪ್ಪನಂತೆ ನಿನ್ನನ್ನೂ ಜನ ಕತ್ತರಿಸಿ ಮಾರಿಬಿಟ್ಟಾರು

ಇಡೀ ಸ್ಥಬ್ಧ ಜಗದಲ್ಲಿ ಅಮ್ಮ , ನೀ ನೆನಪಾಗಿಯೇ ಇದ್ದುಬಿಡು

ಹೃದಯ ಪುಷ್ಪವಾಗಿಸಿ,ನದಿ ತೀರದಲ್ಲಿ ನಿನ್ಯಾರೂ ಇಲ್ಲಿ ಪೂಜಿಸರು .



ಕೊಟ್ಟ ಹಿಂಸೆಗಳು ಗೋಡೆಯಾಚೆ ಹೋಗಿ ಸುದ್ದಿಯಾಗಬಹುದು

ಅದಕ್ಕೆ ಕಣ್ರೆಪ್ಪೆಯ ಕಾವಲಿರಿಸಿ ಒಳಗೆ ಜೋಪಾನವಾಗಿರಿಸಿದ್ದು

ಮೈಯ ಮೇಲಿನ ಬಾಸುಂಡೆಗಳು ಚಿತ್ತಾರದಂತಿರಲಿಲ್ಲವೇನೋ

ಅದಕ್ಕೆ ನೆತ್ತರ ಬರಿಸಿ ರಂಗನ್ನಿಟ್ಟು ಮತ್ತಷ್ಟು ಮೆರುಗುಗೊಳಿಸಿದ್ದು !



ಅತ್ತೂ ಅತ್ತೂ ಏನೋ ಹೊಳೆದಂತಾಗಿ ಮೆಲ್ಲನೆ ಹೊರಜಗತ್ತಿಗೆ ಅಡಿಯಿಟ್ಟೆ

ಓಹ್ ,ಮೂರಂತಸ್ತಿನ ಮನೆಗಳಿರುವ ಬೀದಿಯಲ್ಲಿ ಅಲ್ಲಿನ ಜನರೇ ಇಲ್ಲೆಲ್ಲಾ

ಹಣೆಬರಹ ಬದಲಾಗಬಹುದು,ಹಾಗಂದುಕೊಂಡೆ ಹೆಜ್ಜೆ ಮುಂದಿಟ್ಟೆ

ಮತ್ತೆ ಮುಂದೆ ಹೋಗಲು ದಾರಿ ತಿಳಿಯಲಿಲ್ಲ ..



ರಾತ್ರಿಯ ನಿಶ್ಯಬ್ಧದಲ್ಲಿ ಬಿಕ್ಕಳಿಕೆಯೂ ಲಯವಾಗುತ್ತದೆ

ಭಾವನೆಗಳು ಕರಗಿ ಹೊಟ್ಟೆ ಮತ್ತೆ ಚುರುಗುಡುತ್ತದೆ

ಅಕ್ಕರೆ,ಪ್ರೀತಿ,ಓದು ಬರಹ ಎಲ್ಲವೂ ಕನಸಾದಂತೆ...

ಪುನಃ ಒದ್ದೆ ತಲೆದಿಂಬಿನ ಮೇಲೆ ನಾಳೆಯ ಹಸಿವಿನದೇ ಚಿಂತೆ….

ವಾಣಿ ಶೆಟ್ಟಿ

ನಮ್ಮೂರ ಗಣೇಶೋತ್ಸವದ ಬಗ್ಗೆ ಒಂದು ಮಾತು


ಹದಿನ್ಯ್ದನೆ ವರುಷದ ಇ ಹಬ್ಬ ಮನೆ ಮನೆಗಳಲ್ಲಿ ಸಂತಸ ವನ್ನು ಹಚ್ಚಿ ತಂದಿತ್ತು ...ಪ್ರತಿ ಸಾರಿಯಂತೆ ಎ ಸಲವೂ ಸಹ ಹಣ ಸಂಗ್ರಹಣೆಗೆ ತೊಡಗಿದ ಸ್ನೇಹಿತರು ಬಹಳ ಚಟುವಟಿಕೆಯಿಂದ ಕೊಡಿದ ತಂಡದಂತೆ ಕಂಡು ಬಂದಿತ್ತು ....ಊರಿನ ಇಕ್ಕೆಲಗಳಲ್ಲಿ ಬ್ಯಾನರನ್ನು ಕಟ್ಟಿ ಶುಭ ಸಮಾಚಾರವನ್ನು ಸರಾಲೈತು..... ಕೋಟದ ಅಂದರೆ ಅಮ್ರುಥೆಶ್ವರಿ ದೇವಸ್ಥಾನದಿಂದ (ಗಿಳಿಯಾರು ಪ್ರಾರಂಬ) ಗಣೇಶನ ಚಪ್ಪರದ ತನಕ ಗಣೇಶನನ್ನು ಪೂರ್ಣ ಕಲಶಗಳಿಂದ ಸ್ವಾಗತಿಸಲಾಗಿತ್ತು ಮುಖ್ಯವಾಗಿ ಸ್ತ್ರೀ ಶಕ್ತಿ ಸಂಘ ಗಿಳಿಯಾರು ಇವರ ಸೇವೆ ಅಮೋಘ ...ಪೂರ್ಣ ಗಿಳಿಯರನ್ನು ವಿದ್ಯತ್ ಅಲಂಕಾರದಿಂದ ಶ್ರಂಗರಿಸಲಗಿತ್ತು....
ಪ್ರಥಮ ದಿನ ಉರ ಪರ ಊರ ಮಕ್ಕಳಿಗಾಗಿ ಅಶು ಬಾಷಣ ಸ್ಪರ್ದೆ ಏರ್ಪಡಿಸಲಾಗಿತ್ತು ...ಕುಂದ ಬಾಷೆಯಲ್ಲಿ ಮೆರಗನ್ನು ಪಡೆದ ಇ ಅಶು ಬಾಷಣ ಜನರ ಮನಸನ್ನು ಗೆಲ್ಲುವಲ್ಲಿ ಯಶಶ್ವಿ ಆಗಿತ್ತು ..ವಿಕಾಸ್ ಮತ್ತು ನವೀನ್ ಕುಮಾರ್ ಇದರಲ್ಲಿ ಪ್ರಥಮ ಸ್ಥಾನವನ್ನು ಬಾಚಿ ಕೊಂಡರು...ಇ ಸಲದ ಮಡಿಕೆ ಓಡಯುವಲ್ಲಿ ಎಲ್ಲರು ವಿಪಲರಾದಾಗ ಲಕ್ಷ್ಮಣ್ ರವರೆ ಕೊನೆಯ ಯಶಸನ್ನು ಕಂಡರು....ಸಂಜೆ ನಡೆದ ಕಾರ್ಯಕ್ರಮವನ್ನು ಊರ ಚಿಣ್ಣರು ನಡೆಸಿ ಕೊಟ್ಟರು ...ಗಣೇಶನ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹಂತ ಹಂತದಲ್ಲೂ ಮೆರಗನ್ನು ಹೆಚ್ಹಿಸುತ್ತ ಹೋಗಿತ್ತು ..ಮನೀಶ್ ಕುಮಾರ ಮತ್ತು ತಂಡ ನಡೆಸಿ ಕೊಟ್ಟ ತ್ರಿವಳಿ ಬಟ್ಟರು ನಾಟಕವ೦ತು ಎಲ್ಲರೂ ನಕ್ಕು ನಕ್ಕು ಸಕಾಗುವಂತೆ ಆಗಿತ್ತು ....೪ ವರುಷದ ಬಾಲೆ ಯೊಬ್ಬಳ ನ್ರತ್ಯ ಮನಸಿಗೆ ಮುದ ನೀಡಿತ್ತು ...ರಾತ್ರಿ ಹನ್ನೆರಡರ ತನಕ ನಡೆದ ಇ ಕಾರ್ಯಕ್ರಮವನ್ನು ಊರ ಜನ ನೋಡಿ ಖುಷಿ ಪಟ್ಟರು .......
ಎರಡನೇ ದಿನ ಬೆಳ್ಳಿಗ್ಗೆ ೧೦.೩೦ ಕ್ಕೆ ಪುರೋಹಿತ ನಾಗೇಶ್ ಸೋಮಯಾಜಿಯವರು ಗಣ ಹೋಮ ಪೂಜೆಯನ್ನು ನಡೆಸಿಕೊಟ್ಟರು ಅನಂತರ ಪ್ರರಂಬವಾದ ಅನ್ನ ಸಂತರ್ಪಣ ಸಂಜೆ ೪ ರ ತನಕ ನೆಡಯಿತು ಸದರನ ೧,೨೦೦ ಜನರು ದೇವರ ಪ್ರಸಾದವನ್ನು ಸ್ವೀಕರಿಸಿದರು ...ಊರ ಜನರಿಂದ ದೇಣಿಗೆಗಳು ಹರಕೆ ಹೊರೆಗಳು ಹರಿದು ಬಂದಿದ್ದು ಜನರು ಊರ ದೇವರ ಮೇಲೆ ಇಟ್ಟ ಪ್ರೀತಿಯನ್ನು ಎತ್ತಿ ತೋರಿಸಿತ್ತು ....ಹದಿನಯಿದು ವರುಷದ ಇ ಗಣೇಶೋತ್ಸವಕ್ಕೆ ಪ್ರೇರಣೆ ಯಾಗಿದ್ದ ಮೋಹನ ಶೆಟ್ಟಿಯವರ ನಮ್ಮೊಂದಿಗಿಲ್ಲದಿರುದು ಬೇಸರವನ್ನು ತರಿಸುತಿತ್ತು ....ಬೆಂಗಳೂರಿನಲ್ಲಿರುವಾ ಎಲ್ಲ (giliyar guys)ರು ಹಾಗು ಊರ ಪರ ಊರ ಜನ ಇ ಒಂದು ಅದ್ಬುತ ಹಬ್ಬಕ್ಕೆ ಸಾಕ್ಷಿಯಾದರು .....ಎರಡನೇ ದಿನ ಸಂಜೆ ನಡೆದ ಕಾರ್ಯಕ್ರಮ ಸುಂದರವಾಗಿ ಮುಡಿ ಬಂತು ...ಗಿಳಿಯಾರಿನ ಎರಡು ಅಪರೂಪದ ಪ್ರಥಿಬೆಗಳಿಂದ ನ್ರತ್ಯ ಸಂಗೀತ ನಾಟಕ ಮತ್ತು ಬರತ್ ನಾಟ್ಯ ಕಾರ್ಯಕ್ರಮ,ಬದ್ರಾವತಿ ಅರ್ಕೆಸ್ತ್ರ ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲೈತು .....
ಕೊನೆಯ ದಿನದ ಗಣೇಶನ ವಿಸರ್ಜನ ಕಾರ್ಯಕ್ರಮ ದೊಡ್ಡ ಮೆರವಣಿಗೆಯ ಮೂಲಕ ಊರ ಬೀದಿಗಳಲ್ಲಿ ಸಾಗಿ ಬಂತು ....ಡೋಲು ವಾದ್ಯ ,ಕುಣಿತ ನ್ರತ್ಯ ಹೊವಿನ ಅಲಂಕಾರಗಳಿಂದ ಜಗಮಗಿಸುತಿತ್ತು ....ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಬ್ರಮ ಪಟ್ಟರು ಯಾವೊಂದು ಅದ್ಯಕ್ಷ ಉಪದಕ್ಷ ನಿಲ್ಲದ ಇ ಸಂಘ (GILIYAR GUYS) ತನ್ನ ಮೆರಗನ್ನು ಪಡಯಿತು...ಇದೊಂದು ಮಾದರಿ ಗಣೇಶೋತ್ಸವ ಎನ್ನುವ ಹೆಗ್ಗಳಿಕೆಯಿಂದ ಕಾರ್ಯಕ್ರಮ ಮಂಗಳ ಗಿತೆ ಹಾಡಿತ್ತು
ಉತ್ತಮ ರಂಗಿನ ಕ್ರಾಯಕ್ರಮ ಕೊಟ್ಟವರು

ಭಾನುವಾರ, ನವೆಂಬರ್ 21, 2010

sports day photo








































































REMOVING GALLSTONES NATURALLY




This is a very useful piece of information, that you may have not received before.This is very true and it works. You can 'google' Dr Lai Chiu-Nan to find out more about her and the feedbacks of this treatment. PS: As always, spread good things around, it may benefit someone.



1. Liver 2. Common Bile Duct3. Gallstones4. Gallbladder

It has worked for many. If it works for you please pass on the good news. Chiu Nan is not charging for it, so we should make it free for everyone. Your reward is when someone, through your word of mouth, benefits from the regime. Gallstones may not be everyones' concern. But they should be because we all have them. Moreover, gallstones may lead to cancer. "Cancer is never the first illness," Chiu Nan points out. "Usually, there are a lot of other problems leading to cancer. In my research in China , I came across some materials which say that people with cancer usually have stones. We all have gallstones. It's a matter of big or small, many or few. One of the symptoms of gallstones is a feeling of bloatedness after a heavy meal. You feel like you can't digest the food. If it gets more serious, you feel pain in the liver area." So if you think you have gallstones, Chiu Nan offers the following method to remove them naturally. The treatment is also good for those with a weak liver, because the liver and gallbladder are closely linked

1. For the first five days, take four glasses of apple juice every day. Or eat four or five apples, whichever you prefer. Apple juice softens the gallstones. During the five days, eat normally.

2. On the sixth day, take no dinner.

3. At 6 PM, take a teaspoon of Epsom salt (magnesium sulphate) with a glass of warm water.

4. At 8 PM, repeat the same. Magnesium sulphate opens the gallbladder ducts.

5. At 10 PM, take half cup olive oil (or sesame oil) with half cup fresh lemon juice. Mix it well and drink it. The oil lubricates the stones to ease their passage.

PS. 1cup=250ml, ? cup lemon juice=3 lemons (approx.)

The next morning, you will find green stones in your stools. "Usually they float," Chiu Nan notes. "You might want to count them. I have had people who passed 40, 50 or up to 100 stones. Very many." "Even if you don't have any symptoms of gallstones, you still might have some. It's always good to give your gall bladder a clean-up now and then.

(Email inf)




ಮಂಗಳವಾರ, ಅಕ್ಟೋಬರ್ 19, 2010

ನಮ್ಮುರ ಹುಡುಗಿ ವಾಣಿ ಬರೆದ ಸು೦ದರವಾದ ಲೆಖನ ನಿಮ್ಮೊ೦ದಿಗೆ -----------

ಈಗ ಒಬ್ಬಳೇ ಅರಬ್ಬೀ ತಟದಲ್ಲಿ ನನ್ನ ನೆನಪಿಸಿಕೊಂಡು ಹಿಂದೆ ಮೂಡಿದ ಹೆಜ್ಜೆಯನ್ನ ತಿರುಗಿ ನೋಡದೆ ನಡೆಯಿತ್ತಿರಬಹುದು ನೀನು ಅಲ್ವಾ...ಇಬ್ಬರಿದ್ದಾಗ ಇದ್ದ ಗಂಟೆಗಟ್ಟಲೆ ನಡೆತ ನಾನಿಲ್ಲ ಅಂತ ಈಗ ನಿಮಿಷಗಟ್ಟಲೆ ಯಾಗಿ ಪರಿವರ್ತನೆ ಗೊಂಡಿರಬಹುದೇನೋ..!ಹೇಯ್ ನಿಂಗೊತ್ತಾ ಇಲ್ಲಿಗೆ ಬರೋ ಮೊದಲು ಹೇಳ್ತಿದ್ನಲ್ಲಾ ಬೆಂಗಳೂರಲ್ಲಿ ಬೀಚ್ ಮಾತ್ರ ಇಲ್ಲವೇನೋ.. ಸಂಜೆ ಕಳೆಯೋದು ಬೇಸರವಾಗಬಹುದು ಅಂತ.. ಬೀಚ್ ಅಷ್ಟೇ ಅಲ್ಲ ,ಇಲ್ಲಿ ಏನೇನೂ ಇಲ್ಲ.. ಬೆಳಗ್ಗೆ ಎಳೋವಾಗ ದೇವಸ್ತಾನದ ಸುಪ್ರಭಾತ ಇಲ್ಲ, ಬಚ್ಚಲೊಲೆಯಲ್ಲಿ ಕುದಿಯುವ ನೀರಿಲ್ಲ,ತುಳಸಿಕಟ್ಟೆಗೆ ಇಡಲು ಕೆಂಪು,ಬಿಳಿ ದಾಸವಾಳ ಇಲ್ಲ ,ಬಾವಿ ಇಲ್ಲ ,ಕಾಲೇಜ್ ಮುಗ್ಸಿ ಸಂಜೆ ಬರೋವಾಗ ಪ್ರೀತಿಯಿಂದ ಬಾಲ ಅಲ್ಲಾಡಿಸೋ ನಾಯಿಮರಿ ಇಲ್ಲ, ಓಡಿಬಂದು ಕಾಲಿಗೆ ಮೈ ಒರೆಸುವ ಬಿಲ್ಲಿ ಇಲ್ಲ... ತೆಂಗಿನ ಗರಿಯ ಎಡೆಯಿಂದ ಕಾಣಿಸೋ ನಕ್ಷತ್ರ ಗಳಿಲ್ಲ..ದೂರದಲ್ಲೆಲ್ಲೋ ಊಳಿಡುವ ನರಿಗಳ ಶಬ್ದವಿಲ್ಲ. ...ನಗ್ತಾ ಇದ್ದೀಯ??ಇಲ್ಲ ತಾನೆ...!.?
ಇಲ್ಲಿ ದಿನಗಳು ಓಡ್ತಾ ಇವೆ.. ಅದೇ ಭಯ ನಂಗೆ.......ಸೋಮವಾರದಿಂದ ಶುಕ್ರವಾರ ಕ್ಯಾಬ್,ಲ್ಯಾಪ್ಟಾಪ್, ಮೈಲ್ಸ್,ಕ್ಯಾಫಿಟೇರಿಯ,ಟೀಂ ಲಂಚ್ ,ಮೀಟಿಂಗ್ ,friday ಫನ್ ,ಪರ್ಫಾರ್ಮನ್ಸ್ ,ಅವಾರ್ಡ್, ಹಾಯ್ ಬಾಯ್ ಹೆಲ್ಲೋಗಳಲ್ಲಿ ಕಳೆದುಹೋಗುತ್ತವೆ... ಬಿಟ್ಟೂ ಬಿಡದೆ ನಿಮ್ಮೆಲ್ಲರ ನೆನಪಾಗೋದು ಹೆಚ್ಚಾಗಿ ಇಂಥ ನೀರವ ಸಂಜೆಗಳಲ್ಲಿ. ಬದುಕನ್ನರಸಿ ಬೇರೆಡೆಗೆ ಬರುವವರ ಜೀವನ ಇಷ್ಟೇಯೇನೂ ಅನ್ನಿಸಿಬಿಡುತ್ತೆ..ಗದ್ದೆ,ತೋಟ ಕಾಡುಗಳು ಇಲ್ಲಿ ಯಾಕಿಲ್ವೋ...! ಅರಬ್ಬಿಯ ದೂರದ ಭೋರ್ಗೆರೆಯುವ ಸದ್ದು ಇಲ್ಲಿವರೆಗೆ ಯಾಕೆ ಕೇಳಲ್ವೋ...ಕಣ್ಣು ಹಾಯಿಸಿದಷ್ಟೂ ದೂರದ ಹಸಿರು ಇಲ್ಲಿ ಯಾಕಿಲ್ವೋ...?! ಇರಲಿ ಬಿಡು..ಅದೆಲ್ಲ ಇದ್ದಿದ್ದರೆ ಇದು ಸಿಲಿಕಾನ್ ಸಿಟಿ ಆಗಿರ್ತಿರಲಿಲ್ಲವೇನೋ...! ಅಲ್ವಾ!
ಮತ್ತೆ ನಿಂಗೊತ್ತಾ...ಇಲ್ಲಿನ ಫಜೀತಿಗಳು... ಮೆಜೆಸ್ಟಿಕ್ ಮತ್ತು ಕೆಂಪೇಗೌಡ ಬಸ್ ನಿಲ್ದಾಣ ಎರಡೂ ಒಂದೇ ಅಂತ ನಂಗೆ ಗೊತ್ತೇ ಇರ್ಲಿಲ್ಲ.. ಗೊತ್ತಾಗೋವಷ್ಟರಲ್ಲಿ ದಿನ 4 ಕಳೆದಿತ್ತು... ಇನ್ನು ನಮ್ಮ ಟೀಮ್ ನಲ್ಲಿ ಇರುವ 20 ಜನರಲ್ಲಿ ನಾನೊಬ್ಬಳೆ ಕರ್ನಾಟಕದವಳು.. logout ಆಗಿ ಹೋಗುವಾಗ ಕನ್ನಡ ಮರೆತು ಹೋಯಿತೇನೋ ಅನ್ನಿಸಿರುತಿತ್ತು.. ಈ ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಬಿಟ್ಟು ಉಳಿದೆಲ್ಲ ಭಾಷೆಗಳಿವೆ..!
ಮತ್ತೆ ಇಲ್ಲಿನ ಜನರ ಬಗ್ಗೆ ಕೇಳ್ತಿಯಾ? ಅಲ್ಲೆಲ್ಲೋ ರೈನ್ ಡಾನ್ಸ್ ಮಾಡಿ ಖುಷಿನ "ಕೊಂಡುಕೊಳ್ಳುವ " ಪಕ್ಕದ ಮನೆಯ ಫ್ಯಾಮಿಲಿ ,ನಾನು ಮಳೆ ಬಂದಾಗ ಟೆರೇಸ್ ಮೇಲೆ ಹೋಗಿ ನೆನೆಯುದನ್ನು ನೋಡಿ ನಗುತ್ತಾವೆ.. ಅಜ್ಜಿ ಹೊಲಿಸಿಕೊಟ್ಟ ರೇಷ್ಮೆ ಲಂಗ ಬ್ಲೌಸು ಹಾಕಿಕೊಂಡರೆ ಮೇಲಿಂದ ಕೆಳಗಿನವರೆಗೆ ವಿಚಿತ್ರವಾಗಿ ನೋಡುವ ಓನರ್ ನ ಮಗಳು ಮಾರ್ಕೆಟ್ಗೆ ಸ್ಕೂಟಿಯಲ್ಲಿ ಹೋಗೋದು ತೋಳಿಲ್ಲದ ನೈಟಿಯಲ್ಲೇ..ನಿನ್ನೆ ಆಫೀಸಲ್ಲಿ ಟ್ರೈನಿಂಗ್ ಕೊಡುತ್ತಿದ್ದ ಸೀನಿಯರ್ ಅದೂ ಇದು ಮಾತಾಡುತ್ತ ಸಡನ್ ಆಗಿ ಯೂ ಡೋಂಟ್ ಹ್ಯಾವ್ ಏನೀ ಬಾಯ್ ಫ್ರೆಂಡ್ ? ಅಂತ ನಿಂಗೆ ಕೈ ಕಾಲಿಲ್ವ ಅನ್ನೋ ರೆಂಜಲ್ಲಿ ಕೇಳಿದ್ದಳು.. ಅವಳ ಮುಖ ನೋಡಿ ನಗುತ್ತ ಕೇಳಿದ್ದೆ..ನೋ ...ಬಟ್ ವಾಟ್ ಡು ಯೂ ಮೀನ್ ಬೈ "ಏನೀ" ಅಂತ.! ಅವಳು.ಪೆದ್ದು ಪೆದ್ದಾಗಿ ನಕ್ಕು ಯು ಆರ್ ಸೊ ಕ್ಯೂಟ್ ಅಂತ ಕೆನ್ನೆ ಹಿಂಡಿ ಅಲ್ಲಿಂದ ಸರಿದಿದ್ಲು.. ಇಲ್ಲಿ ಜನರೂ ಮರಳು ಜಾತ್ರೆಯೂ ಮರಳು... !
ಹ್ಮ್… ಆಗೆಲ್ಲಾ ಪ್ರತಿ ಕ್ಷಣ ಮಿಸ್ ಮಾಡ್ಕೊಂಡಿದ್ದು ನಿನ್ನನ್ನೇ..ಛೆ ,ನೀನು ಜೊತೇಲ್ ಇರಬೇಕಿತ್ತು ಅಂತ...ಇಲ್ಲಿಗೆ ಬರೋ ಮುಂಚಿನ ದಿನ ಮಲ್ಪೆ ಬೀಚಿನ ಅಲೆಗಳು ಕಾಲನ್ನು ತೊಯಿಸುತ್ತಿದ್ದರೆ ನೀನು ನನ್ನ ಭುಜಕ್ಕೊರಗಿ ಕಣ್ಣೀರಾಗಿಬಿಟ್ಟಿದ್ದೆ ..ನಂಗೊತ್ತು ಕಣೆ ಇನ್ನು ಆ ಕಾಲ ಬರೋದಿಲ್ಲ. ಇಲ್ಲಿ ಹೆವಿ ವರ್ಕ್,ವೀಕೆಂಡ್ ಕ್ಲಾಸ್ ಅಂತ ಹಳೆಯ ನೆನಪುಗಳು ಒಂದೊಂದಾಗಿ ಕಮ್ಮಿ ಆಗಬಹುದೇನೋ...ಟೀಂ ಔಟಿಂಗ್ ,ಟ್ರೆಕ್ಕಿಂಗ್ ಅಂತ ಅಲ್ಲಿನ ಗುಡ್ಡ,ಕಾಡಿನ ದಾರಿ ಮರೆತುಹೊಗಬಹುದೇನೋ.. ನನ್ನ ರೂಂ ನ ಕಿಟಕಿಯಲ್ಲಿಟ್ಟ ನಾವು ಹೆಕ್ಕಿ ತಂದ ಕಪ್ಪೆ ಚಿಪ್ಪುಗಳಿಗೆ ಧೂಳು ಹಿಡಿಯಬಹುದೇನೋ... ನೀ ಕೊಟ್ಟ ಕಾಲ್ಗೆಜ್ಜೆ ಶೂಸ್ ಜೀನ್ಸ್ ಜೊತೆ ಹೊಂದಿಕೊಳ್ಳದೆ ಬೇರೆಯಾಗಬಹುದೇನೋ... ..,ನೀ ಇಟ್ಟ ಮೆಹಂದಿ ಮಸುಕಾದಂತೆ ಊರಿನ ಹಾತೊರೆಯುವಿಕೆ ಕರಗಬಹುದೇನೋ ....
ಹಾಗಾಗಲ್ಲ ಅಲ್ವಾ............?!
ಇಬ್ಬರಿಗೂ ಗೊತ್ತು ಮಾತುಗಳು ಮುಗಿಯದಷ್ಟಿವೆ..ನಾ ಬಂದಾಗ ಹೇಳಿಬಿಡು ಕಡಲ ಕಿನಾರೆಗೆ ಹೋಗಲೇ ಇಲ್ಲ ಅಂತ ..ಮತ್ತೆ ಪಕ್ಕದ ಮನೆಯ ಟೀಪು ನಾ ಬಂದಾಗ ಒಂದು ಸಲ ಬೊಗಳಿಬಿಡಬಹುದೇನೋ...ಬಿಲ್ಲಿ ಈಗ ಯಾರದ್ದೂ ಹಾಸಿಗೆಯ ಹಂಗಿಲ್ಲದೆ ಒಂದೇ ಒಲೆಯ ಮೂಲೆಯಲ್ಲಿ ಮಲಗುವುದ ಅಭ್ಯಾಸ ಮಾಡಿಕೊಂಡಿರಬಹುದೇನೋ. ಮರೆಗುಳಿ ಅಜ್ಜ ,ಇವತ್ತು ವಾಣಿ ಈ ಕಡೆ ಬಂದೆ ಇಲ್ಲ ಅಂತ ದಿನವೂ ಹೇಳುತ್ತಿರಬಹುದೇನೋ…!ತೋಟದಲ್ಲಿದ್ದ ಒಂಟಿ ಬೆಟ್ಟದಾವರೆ ಗಿಡದ ತುದಿಯಲ್ಲಿರುವ ಹೂವುಗಳು ಕೀಳಲು ಎಟುಕದೆ ಹಾಗೆ ಬಾಡಿ ಬಿದ್ದಿರಬಹುದೇನೋ...ದೊಡ್ಡ ಧೂಪದ ಮರದ ಅಡಿಯಲ್ಲಿ ಕೂತುಕೊಳ್ಳುವವರಿಲ್ಲದೆ ಅಲ್ಲಿ ತರಗಲೆಯ ರಾಶಿ ಬಿದ್ದಿರಬಹುದೇನೋ... ತೋಟದ ಕೆರೆಯಲ್ಲಿ ಇಳಿಯುವವರಿಲ್ಲದೆ ಇವತ್ತಿನವರೆಗೂ ನೀರು ತಿಳಿಯಾಗಿಯೇ ಇದ್ದಿರಬಹುದೇನೋ .. .…ಹಿತ್ತಿಲ ಮುಳ್ಳಿನ ಗಿಡ ಪಕ್ಕದಲ್ಲಿದ್ದ ನಿಂಬೆಗಿಡಕ್ಕಿಂತ ಎತ್ತರಕ್ಕೆ ಬೆಳೆದಿರಬಹುದೇನೋ……




ಇಲ್ಲ ಅಂತ ಒಂದು ಸಲ ಸುಳ್ಳು ಹೇಳ್ಬಿಡೆ ಪ್ಲೀಸ್ .....!
ಅಲ್ಲಿಯದೇ ನೆನಪಿನಲ್ಲಿ...
ವಾಣಿ :(

ಭಾನುವಾರ, ಆಗಸ್ಟ್ 29, 2010

ಮೌನವೆತಕೆ ನಿನಗೆ..........


ಆಕಾಶ ಬುಟ್ಟಿಯಲ್ಲಿ ನಿನೇಕೆ ನಕ್ಶತ್ರವಾದೆ...
ನಿನ್ನ ಅಗಲಿಕೆಯ ನೊವು ನನ್ನ ಎದೇಯೊಳಗೆ......
ನನ್ನದೆಯ ನೊವು ನಲಿವಿನ ಮಾತು
ಹೊಸ ಕನಸುಗಳ ಪಿಸುಮಾತುಗಳೆಲ್ಲವು ನಿನ್ನೊಳಗೆ..
ಮತ್ತೆ ಮತ್ತೆ ನಾನಾಗುತ್ತೆನೆ ಮೌನಿ...
ಮತ್ತದೆ ನಿನ್ನ ಹೆಜ್ಜೆ ಗೆಜ್ಜೆಯ ಸದ್ದು...
ಅದ್ಯಾಕೊ ಈ ಸ೦ಜೆ ಮುದವಿರದ ಮಬ್ಬು...
ಅದೆಲ್ಲ ಹೊಗಲಿ ಬಿಡು
ಆ ಜಾರಿ ಹೊದ ನಿನ್ನೆ ಮೊನ್ನೆಗಳ ನಗು ನೊಡು...
ನಾನಿಟ್ಟ ಮೊದಲ ತುತ್ತು ನಿನ್ನ ಬಾಯೊಳಗೆ...
ನಿನೀಟ್ಟ ಮೊದಲ ಮುತ್ತು ನನ್ನ ಹಣೆಯ ಮೇಲೆ....
ಮತ್ತೊಮ್ಮೆ ಕೆಳಬೇಡ ಅಮ್ಮ ನೀ ನಗುತಿಲ್ಲವ್ಯಾಕೆ೦ದು...
ಮತ್ತೊಮ್ಮೆ ಕೆಳದಿರು ಮೌನವೆತಕೆ ನಿನಗೆ...
ಮೌನವೆತಕೆ ನಿನಗೆ..........
J.P GILIYAR

ಶನಿವಾರ, ಆಗಸ್ಟ್ 28, 2010

ಪ್ರೀತಿಯೆಂದರೆ.......??

freinds....ಇದರ ಮೂಲ ಲೇಖಕರನ್ನು ಪತ್ತೆ ಹಾಕುವಲ್ಲಿ ವಿಪಲನಗಿದ್ದೇನೆ...ನನಗೆ ತುಂಬಾ ಇಷ್ಟವಾದ ಲೇಖನವಿದು ........

ಪ್ರೀತಿಯೆಂದರೆ.......?? ಹೀಗೊಂದು ಯೋಚನೆ ಎಲ್ಲರಿಗೂ ಬಂದಿರಬಹುದು. ಪದಗಳಲ್ಲಿ ಸರಿಯಾಗಿ ವ್ಯಕ್ತಪಡಿಸಲಾಗದ, ಭಾವನೆಗಳ ಮಹಾಪೂರ. ಪಶ್ಚಿಮದ ದೇಶದಲ್ಲಾದರೆ 'i love you' ಅನ್ನುವ ಒಂದೇ ಒಂದು ವಾಕ್ಯದಲ್ಲಿ ಹೇಳಲಾಗುವ ಭಾವನೆ. ಅಪ್ಪ, ಅಮ್ಮ, ತಮ್ಮ, ಗೆಳತಿ, ಹೆಂಡತಿ ಎಲ್ಲ ಸಂಬಂಧಗಳಿಗೂ ಅದೇ ಮೂರು ಶಬ್ದಗಳನು ಉಪಯೋಗಿಸಿ ಬಿಡುತ್ತಾರೆ, ಆ ಮಾಹಾಜನರು. (ರಾಹುಲ್ ಮಹಾಜನನಿಗೆ ಅದರರ್ಥ ಗೊತ್ತಿಲ್ಲ ಬಿಡಿ) ಇಲ್ಲಿ ನಮ್ಮಲ್ಲಾದರೆ ? ಪ್ರೇಮಿಗಳಿಗೆ ತಪ್ಪಿದರೆ ಸ್ನೇಹಿತರಿಗೆ ಮಾತ್ರ ಉಪಯೋಗಿಸಲ್ಪಡುವ ಶಬ್ದ (ನಾನು ಹೇಳ ಹೊರಟಿರುವುದು ಮಾಮೂಲಿ ಪಟ್ಟಣದ ವಿಷಯ). ಹೋಗಿ ಅಜ್ಜನಿಗೋ, ಅಜ್ಜಿಗೋ ಹೇಳಿ ನೋಡೋಣ ' i love you' ಎಂದು....! ಇವಳಿಗೆ ಯಾವಾಗಿಂದ ಹುಚ್ಚು ಅನ್ನಬಹುದು.



Love is blind ಪ್ರೀತಿ ಕುರುಡು ಇದು ಎಲ್ಲರಿಗೂ ಗೊತ್ತಿರೋ ವಿಷಯ. Its deaf and dumb too ಮಾರಾಯರೇ. ಪ್ರೇಮಿಸುತ್ತಿರುವ ಒಂದು ಯುವ ಜೋಡಿಗೆ ನೀವು ಏನು ಹೇಳಿದರೂ ಕೇಳೋದೇ ಇಲ್ಲ,ಅವ್ರು ಅಂದಿದ್ದೆ ಸರಿ ಅಂತಾರೆ. ಇದು deaf ಆಯ್ತು ಇನ್ನು dumb?? ಮೂಕ ಪ್ರೀತಿ ಅಂತ ಕೇಳಿರಬೇಕಲ್ವಾ? ಪ್ರೀತಿಯನ್ನು ಪದಗಳಲ್ಲಿ ಸೆರೆ ಹಿಡಿಯೋಕೆ ಆಗೋದೇ ಇಲ್ಲ. ಅದಕ್ಕೆ 'ಪ್ರೇಮ ಪತ್ರಗಳು' ಇನ್ನು ಜೀವಂತ. ಹುಡುಗ ಯಾವುದೇ ಪುಸ್ತಕ ಓದದಿದ್ದರೂ ಹುಡುಗಿಗೆ ಲವ್ ಲೆಟರ್ ಕೊಡೊ ಸಂದರ್ಭ ಬಂದ್ರೆ 'ಪ್ರೇಮ ಪತ್ರದ link' ಖಂಡಿತ ಹುಡುಕೆ ಹುಡುಕ್ತಾನೆ. !



ಸರಿ ಬಿಡ್ರೀ ವಿಷಯಕ್ಕೆ ಬರ್ತೇನೆ. ನಾನು ಮೇಲೆ ಹೇಳಿರೋದಕ್ಕೆ, ಈಗ ಬರ್ಯೋದಕ್ಕೆ ಅಷ್ಟೊಂದು ಸಂಬಂಧ ಇಲ್ಲ ಬಿಡಿ. ಆದರೂ ನಿಮ್ ತಲೆ ತಿಂದೆ,.... ಯಾಕೆ ಸುಮ್ನೆ ಒಂದೇ ಸಲ ಸಿರಿಯಸ್ ಯಾಗೋದು ಹೇಳಿ?



ಮೊನ್ನೆ ಅಕ್ಕನ ಜೊತೆ ಚಾಟ್ ಮಾಡ್ತಿದ್ದೆ g-talk ನಲ್ಲಿ ಯಾರೋ ಮಾತಿಗೆ ಎಳೆದರು.ಅಷ್ಟೇನೂ ಗೊತ್ತಿರದ orkut friend. ನನ್ನ ಬಗ್ಗೆ ವಿಚಾರಿಸುತ್ತಲೇ "Do u 've Boy fren?" ಎಂದು ಬಿಟ್ಟಿತ್ತು ಆ ಆಸಾಮಿ. " yup many guy frens are der" ಅನ್ನೋ ಉತ್ತರ ಕೊಟ್ಟೆ. " no no i mean lover"ಅಂದಿತ್ತು ಆ ಕಡೆ ಪಾರ್ಟಿ."nope i don belive in love" ಎನ್ನುತ್ತಲೇ log out ಆಗಿದ್ದೆ.



ಉತ್ತರವೇನೋ ಕೊಟ್ಟಿದ್ದೆ ಆದರೆ ಪ್ರೀತಿ ಎಂದರೇನು ಅನ್ನೋ ವಿಷಯ ಹುಳವಾಗಿ ತಲೆ ಹೊಕ್ಕಿತ್ತು. ಕೆಲವು ಗೆಳೆಯ/ಗೆಳತಿಯರಿಗೆ message ಮಾಡಿಬಿಟ್ಟೆ. ಉತ್ತರ ಬರಲಾರಂಭಿಸಿತು... ಎಲ್ಲರೂ ತತ್ವಜ್ಞಾನವನ್ನೇ ಹೇಳುತ್ತಿದ್ದರೇ ವಿನಃ sweet and simple ಆಗಿ ಹೇಳಲೇ ಇಲ್ಲ ..ಅಥವಾ ನನ್ನ ಮನದೊಳಗಿದ್ದ ಉತ್ತರವನ್ನು ಯಾರೂ ಕೊಡಲೇ ಇಲ್ಲ..!



ಹಾಗೆ ಯೋಚಿಸುತ್ತಲೇ ಇದ್ದ ನನ್ನ ಮನದಲ್ಲಿ ಒಂದಿಷ್ಟು ಘಟನೆಗಳು ಹಾದುಹೋದವು... ಪ್ರೀತಿಯನ್ನು ನಾವು ಶಬ್ದಗಳಲ್ಲಿ ಕಟ್ಟಿಹಾಕಲಾರೆವು ಸರಿ. ಆದರೆ ಇದು ಪ್ರೀತಿ ಎಂದು ಮನಸು ಒಂದು ಘಟನೆಯನ್ನು ನೋಡಿದ ತಕ್ಷಣ ನಿರ್ಧರಿಸಿ ಬಿಡುತ್ತದೆ ಅಲ್ವಾ ? ನನ್ನ ಜೀವನದಲ್ಲಿ ನಡೆದ, ನಾನು ನೋಡಿದ ಘಟನೆಗಳು ಇವು .....



*ಇಸ್ತ್ರಿ ಮಾಡುವಾಗ ತನ್ನ ಅಚ್ಚುಮೆಚ್ಚಿನ ಸೀರೆಯ blouse ಸುಟ್ಟುಕೊಂಡ ಅಮ್ಮ, ದುಃಖ ತಡೆಯಲಾಗದೆ ಜಿನುಗಿದ ಕಣ್ಣೀರು. ಅಮ್ಮ ಸಂಜೆ ಶಾಲೆಯಿಂದ ಬರುವಷ್ಟರಲ್ಲಿ ಪೇಟೆಗೆ ಹೋಗಿ ಹೊಸ matching blouse ತಂದುಕೊಟ್ಟ ಪಪ್ಪ.



*ದನಗಳನ್ನು ಪ್ರೀತಿಯಿಂದ ಸಾಕಿ ಅವುಗಳಿಗೆ ಹೆಸರಿಟ್ಟು ಕರೆಯುವ ಪಕ್ಕದ ಮನೆಯ ಮುಸ್ಲಿಂ ಕುಟುಂಬ.



*ನಾನು ಮಂಗಳೂರನ್ನು ಬಿಟ್ಟು ಬರುವಾಗ ತನ್ನ ಪ್ರೀತಿಯ teddybearನ್ನುನನ್ನ ಕೈಗಿತ್ತು "ಎಲ್ಲಿ ಹೋದರೂ ಇದನ್ನು ತಗೊಂಡು ಹೋಗು ಸೌಮ್ಯ ನನ್ನ ನೆನಪಿಗೆ" ಎಂದು ಕಣ್ಣೀರಾದ ಗೆಳತಿ.



*ಗೆಳೆಯನ revaluation ಗೋಸ್ಕರ ತನ್ನ ಹೊಸ hand-setನ್ನೇ ಮಾರಿದ ನನ್ನ ಸ್ನೇಹಿತ .!



*ಡೈರಿಯ ಹಾಳೆಗಳ ಮಧ್ಯೆ ಬಣ್ಣಗೆಟ್ಟು ಮುಗುಮ್ಮಾಗಿ ಕುಳಿತಿರುವ ಪ್ರತಿ friendship day & valentines day ಗಳಿಗೆ ಆತ್ಮೀಯ ಗೆಳೆಯ ಕೊಟ್ಟ ಹಳದಿ ಗುಲಾಬಿ ಹೂಗಳು.



*ಬೀದಿ ನಾಯಿ ಬಂದಿಲ್ಲವೆಂದು ತನಗೆ ಹಾಕಿದ ಊಟವನ್ನು ಮುಟ್ಟದೆ ಕುಳಿತಿದ್ದ ಗೆಳತಿಯ ಮನೆಯ ಬೆಕ್ಕು.



*ಕಳೆದು ಹೋದ ಗೆಳತಿಯ ನೆನಪಲ್ಲಿ ಪ್ರತಿ ಶನಿವಾರ ಆಂಜನೇಯನ ಗುಡಿಗೆ ಹೋಗಿ ಬಂದು school-book companyಯ ಎದುರಿನ ಜನಜಂಗುಳಿಯಲ್ಲಿ ಅವಳನ್ನು ಹುಡುಕುವ ಕ್ರಿಶ್ಚಿಯನ್ನರ ಹುಡುಗ .!



*ಜೀವದ ಗೆಳೆಯ ಕೊಟ್ಟ chocolateನ್ನು ತಾನೊಬ್ಬಳೆ ತಿಂದು ಉಳಿದ ಗೆಳತಿಯರಿಗೆ ಅಂಥದ್ದೇ ಬೇರೆ chocolate ತಂದು ಕೊಡುವ ನನ್ನ ಗೆಳತಿ ..! (ಅದೇಕೆ ಎಂದು ಕೇಳಿದಾಗ ಅವಳಿಂದ ಬಂದ ಉತ್ತರ " ನಾನು ಅವನ ಪ್ರೀತಿಯನ್ನು ಬೇರೆಯವರಿಗೆ ಹಂಚಲಾರೆ..!" )



*ಕೊಟ್ಟಿಗೆಯಲ್ಲಿ ಕಟ್ಟಿ ಹಾಕೆಂದು ಮನೆಯ ವರೆಗೆ ಬಂದು ಅಜ್ಜನನ್ನು ಕರೆದುಕೊಂಡು ಹೋಗುವ ಅಜ್ಜನ ಪ್ರೀತಿಯ ಎಮ್ಮೆ.



*ಶಾಲಾದಿನಗಳಲ್ಲಿ ಉದ್ದಕಿದ್ದ ನನ್ನ ಕೂದಲನ್ನು ಹೆಣೆದು ಜಡೆ ಕಟ್ಟುತ್ತಿದ್ದ, ಈಗಲೂ ಅದೇ ಪ್ರೀತಿಯಂದ ನನ್ನ ಮೋಟು ಕೂದಲಿಗೆ ಜುಟ್ಟು ಹಾಕುವ ನನ್ನ ಅಮ್ಮ.



*ತಟ್ಟೆ ಇಟ್ಟು ಪ್ರೀತಿಯಿಂದ ಬಡಿಸಿ ಊಟ ಮುಗಿಯುವ ವರೆಗೂ ಅದೂ-ಇದೂ ಸುದ್ದಿ ಹೇಳುತ್ತಲೇ ಇದ್ದು ನಂತರ ತಾನು ಉಣ್ಣುವ ನನ್ನ ಅಜ್ಜಿ . ಅದೆಷ್ಟು ಹೊತ್ತಾದರೂ ಸರಿ ಅಜ್ಜ ಬರದೇ ಊಟ ಮಾಡಲೊಲ್ಲದ ನನ್ನ ಅಜ್ಜಿ .


* ಗಿಡಗಳಲ್ಲಿ ಅದೆಷ್ಟೇ ಹೂಗಳಾದರೂ ಅದನ್ನು ಕಿತ್ತು ಮುಡಿಯದ, ಬೇರೆಯವರು ಕೀಳುವುದನ್ನೂ ವಿರೋಧಿಸುವ ಅಮ್ಮ .


*ನಾನು ಜ್ವರ ಬಂದು ಮಲಗಿದಾಗ ರಾತ್ರಿಯೆಲ್ಲಾ ಎಚ್ಚರವಿದ್ದು ನೋಡಿಕೊಂಡ ಹಾಸ್ಟೆಲಿನ ಗೆಳತಿ.


*ಸಾಯುವ ಮೊದಲು ತನ್ನ ಪ್ರೀತಿಯ ಹುಡುಗಿಯ ಹೆಸರನ್ನು ಕನ್ನಡದಲ್ಲಿ ಡೈರಿ ಪೂರ್ತಿ ಬರೆದ ಮಿಜೋರಾಮಿನ ಹುಡುಗ..
*ಬೆಂಗಳೂರಿಗೆ ಬಂದಾಗ ಅದೆಷ್ಟೋ ವರ್ಷದ ಸ್ನೇಹಿತೆಯಂತೆ ಆತ್ಮೀಯತೆಯಿಂದ ನೋಡಿಕೊಂಡ orkut ಗೆಳತಿ, ಹಂಚಿಕೊಂಡ ಸಣ್ಣ ಪುಟ್ಟ ಸಂಗತಿಗಳು. ಅದೆಷ್ಟೋ ವರ್ಷಗಳಿಂದ ಜೊತೆಯಿದ್ದ ಜೋಡಿ ನವಿಲಿನ ಕ್ಲಿಪ್ ಒಂದನ್ನು ನನಗೆ ಕೊಟ್ಟ ಕ್ಷಣ ..!

*ಹಾಸ್ಟೆಲಿನಲ್ಲಿ ಬರೀ ಒಂದು ತಿಂಗಳು ನನ್ನ ಜೊತೆಗಿದ್ದು. CET ಕೋಚಿಂಗ್ ಕ್ಲಾಸ್ ಮುಗಿಸಿ ಹೊರಡುವ ಹಿಂದಿನ ರಾತ್ರಿಯೆಲ್ಲ ನನ್ನ ಕೈ ಹಿಡಿದು ಮಂಚಕ್ಕೆ ಒರಗಿದ್ದ ಪೋರಿ ..!

*ಅಮ್ಮನಂತೆ ಸ್ನೇಹಿತೆಯಂತೆ ನನ್ನ ನೋಡಿಕೊಂಡ PG ಆಂಟಿ .



ಇಂಥಹ ಅದೆಷ್ಟೋ ಘಟನೆಗಳು ನಿಮ್ಮೊಂದಿಗೂ ನಡೆದಿರುತ್ತವೆ. ಆದರೆ ಪ್ರೀತಿ ಎಂದೊಡನೆ ಬರೀ ಹೆಣ್ಣು- ಗಂಡಿನ ನಡುವಣ ಸಂಬಂಧ ಎನ್ನುವುದೇತಕ್ಕೋ ? ಮಮತೆ, ಪ್ರೇಮ, ಪ್ರೀತಿ, ಕಾಮ ಇದೆಲ್ಲರ ವ್ಯತ್ಯಾಸವೇ ಅರಿಯದಂತೆ ಆಡುವುದು ಏತಕ್ಕೆ ?



ಪ್ರೀತಿ ಹುಟ್ಟಿ.. ಸಲ್ಲದ ಸಂಬಂಧ ಬೆಳೆದು. ಮಕ್ಕಳಾಗಿ ..ಮದುವೆಯಾಗಿ ಒಂದೇ ವರುಷಕ್ಕೆ divorce ಗೆ ತಿರುಗುವ ಪಾಶ್ಚಿಮಾತ್ಯ ದೇಶದ ಈ ಒಂದು ಅನುಕರಣೆ ಬೇಕೇ ? ಪ್ರೀತಿ ಪ್ರೀತಿ ಎಂದು ದೈಹಿಕ ಕಾಮನೆಗಳ ತೀಟೆ ತೀರಿಸಿಕೊಳ್ಳುವ ಈ ಜನಕ್ಕೆ 'boy-friend, girl friend' ಎಂದು ಸ್ನೇಹಕ್ಕೆ ಮಸಿಬಳಿಯುವುದು ಯಾಕೆ ?
ಪ್ರೀತಿಗೆ ಕೃಷ್ಣ - ರಾಧೆಯರ ಉದಾಹರಣೆ ಕೊಡುವ ದೇಶ ನಮ್ಮದು. ದೇಶವನ್ನೂ ನಾವು ಮಾತೆಯಾಗಿ ಕಾಣುತ್ತೇವೆ ಅಲ್ವಾ ? ಈ boy friend- girl friend ಸಂಸ್ಕೃತಿ ನಮ್ಮದಲ್ಲ. ಗಂಡು ಹೆಣ್ಣಿನ ನಡುವೆ ನಿಷ್ಕಲ್ಮಶ ಸ್ನೇಹವೂ ಇರುತ್ತದೆ. ಒಂದು ವೇಳೆ ಬರೀ ಸ್ನೇಹಕ್ಕೆ ಬಳಸುತೀರೀ ಆ ಶಬ್ದವನ್ನು ಎಂದಾದರೆ ಸ್ನೇಹದಲ್ಲಿ ಗಂಡು ಹೆಣ್ಣೆಂಬ ಭೇದ ಯಾಕೆ ?



ಪ್ರೀತಿ ಯಾವತ್ತಿದ್ದರೂ ಪ್ರೀತಿಯೇ ಅದಕ್ಕೊಂದು ನಿರ್ಮಲವಾದ ಪರಿಶುದ್ಧವಾದ ಅರ್ಥವಿದೆ. ಅದೊಂದು ಶುದ್ಧ ಸರೋವರ ದಯವಿಟ್ಟು ಅದರಲ್ಲಿ ಅಶ್ಲೀಲತೆಯ ಕಲ್ಲೆಸೆಯಬೇಡಿ

ಮಂಗಳವಾರ, ಆಗಸ್ಟ್ 10, 2010

ಪೀಟರ್‌ಸನ್‌

ಮೈಕೆಲ್ ವಾನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಕೆವಿನ್ ಪೀಟರ್ ಸನ್ ಅವರನ್ನು ಇಂಗ್ಲೆಂಡ್‌ನ ನೂತನ ಕ್ಯಾಪ್ಟನ್ ಎಂದು ಘೋಷಣೆ ಮಾಡಲಾಗಿದೆ. ಮೂಲತಃ ದಕ್ಷಿಣ ಆಫ್ರಿಕಾದವನಾದ ಪೀಟರ್‌ಸನ್ ೨೦೦೪ರಲ್ಲಿ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದಾಗ ನಾನು ಬರೆದಿದ್ದ ಲೇಖನ ಇದಾಗಿದೆ.

ಅವರೇನು ರತ್ನಗಂಬಳಿ ಹಾಸಿ ಕರೆದಿರಲಿಲ್ಲ!
ಅಂತಹ ಅಗತ್ಯವೂ ಇರಲಿಲ್ಲ. ಅಷ್ಟಕ್ಕೂ ಅವನೇನು ಸಚಿನ್ ತೆಂಡೂಲ್ಕರ್‌ನಂತೆ ಮೀಸೆ ಮೂಡುವ ಮೊದಲೇ ಛಾಪು ಒತ್ತಿದವನಲ್ಲ. ಆದರೆ ಪ್ರತಿಭೆಯ ಎಲ್ಲ ಕುರುಹುಗಳೂ ಇದ್ದವು. ಆದರೂ ಸೂಕ್ತ ವೇದಿಕೆಯ ಕೊರತೆಯಿತ್ತು. ಕ್ರಾಝುಲು ನಟಾಲ್(KwaZulu-Natal) ಪರ ಆಡುತ್ತಿದ್ದರೂ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸುವ ಅವಕಾಶದಿಂದಲೇ ವಂಚಿತನಾಗಬೇಕಿತ್ತು. “Positive discrimination quota’ ವ್ಯವಸ್ಥೆ ಹಾಗಿತ್ತು. ವರ್ಣಭೇದ ನೀತಿಯ ಸುಳಿಗೆ ಸಿಲುಕಿ ತುಳಿತಕ್ಕೊಳಗಾಗಿದ್ದ ಕಪ್ಪುವರ್ಣೀಯರನ್ನು ಮೇಲೆತ್ತುವ ಸಲುವಾಗಿ ಕ್ರೀಡಾ ಕ್ಷೇತ್ರದಲ್ಲೂ ಮೀಸಲು ಅಥವಾ ಕೋಟಾ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಕಪ್ಪುವರ್ಣೀಯ ಯುವ ಕ್ರೀಡಾ ಪಟುಗಳಿಗೆ ಕೋಟಾ ವ್ಯವಸ್ಥೆಯಡಿ ದೇಶವನ್ನು ಪ್ರತಿನಿಧಿಸುವ ವಿಶೇಷ ಅವಕಾಶವನ್ನು ಕಲ್ಪಿಸಲಾಗಿತ್ತು. ಶ್ವೇತವರ್ಣೀಯರಿಗೆ ಪ್ರತಿಭೆ ಇದ್ದರೂ ಅವಕಾಶ ದೊರೆಯುತ್ತದೆಂದು ಹೇಳುವಂತಿರಲಿಲ್ಲ. ಹಾಗಾಗಿ ಹನ್ನೊಂದನೇ ವರ್ಷಕ್ಕೆ ಕ್ರಿಕೆಟ್ ಆಡಲು ಆರಂಭಿಸಿದ್ದ ‘ಕೆವಿನ್ ಪೀಟರ್ ಪೀಟರ್‌ಸನ್’ ಚಿಂತಿತನಾಗಿದ್ದ. ಭ್ರಮನಿರಸನಗೊಂಡಿದ್ದ.
ಅದೇ ಸಂದರ್ಭದಲ್ಲಿ, “ವಿಹಾರವೆಂಬಂತೆ ಇಲ್ಲಿಗೆ ಬಂದು, ನಾಲ್ಕಾರು ತಿಂಗಳು ಕ್ರಿಕೆಟ್ ಆಡಿ, ತಿಂದುಂಡು ವಾಪಸ್ ಹೋಗಲು ಬರುವುದು ನನಗಿಷ್ಟವಿಲ್ಲ. ನೀನು ಕಾಂಟ್ರ್ಯಾಕ್ಟ್‌ಗೆ ಸಹಿ ಹಾಕಬೇಕು. ನಾಲ್ಕು ವರ್ಷ ಇಲ್ಲೇ ಆಡಬೇಕು. ಆಗ ಇಂಗ್ಲೆಂಡನ್ನು ಪ್ರತಿನಿಧಿಸುವ ಅರ್ಹತೆ ದೊರೆಯುತ್ತದೆ” ಎಂಬ ಸರಳ ಸಂದೇಶ ಬಂದಿತ್ತು. ಅದು ಕೌಂಟಿ ಕ್ರಿಕೆಟ್ ಆಡುವ contract. ನಾಟಿಂಗ್‌ಹ್ಯಾಮ್‌ಶೈರ್‌ನ ತರಬೇತುದಾರ ಕ್ಲೈವ್ ರೈಸ್ ಇಂತಹ ಸಂದೇಶ ಕಳುಹಿಸಿದ್ದರು.
ಅವಕಾಶವನ್ನು ಬಿಡುವ ಪ್ರಶ್ನೆಯೇ ಇರಲಿಲ್ಲ. ಪೀಟರ್‌ಸನ್ ಇಂಗ್ಲೆಂಡ್‌ನತ್ತ ಮುಖ ಮಾಡಿದ. ೨೦೦೧ರಲ್ಲಿ ನಾಟಿಂಗ್‌ಹ್ಯಾಮ್‌ಶೈರ್ ಪರ ಕೌಂಟಿ ಕ್ರಿಕೆಟ್‌ಗೆ ಕಾಲಿಟ್ಟ. ಮೊದಲ ಸೀಸನ್ ನಲ್ಲೇ ಐದು ಸೆಂಚುರಿ ಹಾಗೂ ಒಂದೆರಡು ಡಬಲ್ ಸೆಂಚುರಿ ಬಾರಿಸಿದ. ಆದರೆ ವಿವಾದ ಆರಂಭವಾಯಿತು. ನಾಟಿಂಗ್‌ಹ್ಯಾಮ್‌ಶೈರ್ ನಾಯಕ ಜೇಸನ್ ಗಾಲಿಯನ್ ಜತೆ ತಿಕ್ಕಾಟ. ಒಮ್ಮೆಯಂತೂ ಪೀಟರ್‌ಸನ್‌ನ ಸ್ಪೋರ್ಟ್ಸ್ ಕಿಟ್ಟನ್ನೇ ಹೊರಗೆಸೆದ ಗಾಲಿಯನ್, ಬ್ಯಾಟನ್ನೂ ಮುರಿದು ಹಾಕಿದ. ಸಂಬಂಧ ಸರಿಪಡಿಸಲಾರದಷ್ಟು ಹಳಸಿತು. ಆದರೂ ಒಪ್ಪಂದದಂತೆ ಮೂರು ವರ್ಷ ನಾಟಿಂಗ್‌ಹ್ಯಾಮ್‌ಶೈರ್ ಪರವೇ ಆಡಬೇಕಿತ್ತು. ಸಹ ಆಟಗಾರರೊಂದಿಗೆ ಮುಖಕೆಡಿಸಿಕೊಂಡರೂ ಆತನ ಬ್ಯಾಟಿಂಗ್ ಬಗ್ಗೆ ಯಾರೂ ಚಕಾರವೆತ್ತುವಂತಿರಲಿಲ್ಲ. ಹೀಗೆ ಮೂರು ವರ್ಷ ಬ್ಯಾಟಿನಿಂದಲೇ ಉತ್ತರ ನೀಡಿದ ಪೀಟರ್‌ಸನ್, ೨೦೦೪ರಲ್ಲಿ ಹ್ಯಾಂಪ್‌ಶೈರ್ ನೊಂದಿಗೆ ಒಪ್ಪಂದ ಮಾಡಿಕೊಂಡ. ಆ ಹ್ಯಾಂಪ್‌ಶೈರ್ ತಂಡದ ನಾಯಕ ಮತ್ತಾರೂ ಅಲ್ಲ, ವಿಶ್ರವಿಖ್ಯಾತ ಸ್ಪಿನ್ನರ್ ಶೇನ್ ವಾರ್ನ್. ಆಸ್ಟ್ರೇಲಿಯಾದ ವಾರ್ನ್ ಮತ್ತು ದಕ್ಷಿಣ ಆಫ್ರಿಕಾದ ಪೀಟರ್‌ಸನ್ ಇಬ್ಬರ ಮಧ್ಯೆ ಅದಾವುದೋ ನಂಟು ಆರಂಭವಾಯಿತು. ನಾಟಿಂಗ್‌ಹ್ಯಾಮ್ ನಾಯಕ ಗಾಲಿಯನ್ ವೈಷಮ್ಯ ಸಾಧಿಸಿದರೆ, ಶೇನ್ ವಾರ್ನ್ ಯುವ ಆಟಗಾರ ಪೀಟರ್ ಸನ್‌ನ ಬೆಂಗಾವಲಿಗೆ ನಿಂತ. ಅಗತ್ಯವಿದ್ದ ಎಲ್ಲ ಪೋ ನೀಡಿದ.
ನಾಲ್ಕು ವರ್ಷ ಕಳೆದೇ ಹೋಯಿತು.
೨೦೦೪ರ ಸೆಪ್ಟೆಂಬರ್‌ನಲ್ಲಿ ಜಿಂಬಾಬ್ರೆ ವಿರುದ್ಧ ನಡೆಯಲಿದ್ದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡದ ಆಯ್ಕೆ ನಡೆದಿತ್ತು. ಕೌಂಟಿ ಕ್ರಿಕೆಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದರೂ, ಟನ್‌ಗಟ್ಟಲೆ ರನ್ ಹೊಡೆದಿದ್ದರೂ, ಪ್ರತಿಭೆಯನ್ನು ಸಾಬೀತುಪಡಿಸಿದ್ದರೂ ಸಾಧನೆಯೊಂದರಿಂದಲೇ ಇಂಗ್ಲೆಂಡ್ ತಂಡಕ್ಕೆ ಆಯ್ಕೆಯಾಗುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ ಪೀಟರ್‌ಸನ್ ದಕ್ಷಿಣ ಆಫ್ರಿಕಾದವನಾಗಿದ್ದ. ಆದರೇನಂತೆ, ಪೀಟರ್‌ಸನ್ ಅಮ್ಮ ಇಂಗ್ಲೆಂಡ್‌ನಲ್ಲಿ ಜನಿಸಿದವಳಾಗಿದ್ದಳು. ಆ ಕಾರಣಕ್ಕಾಗಿ ಇಂಗ್ಲೆಂಡನ್ನು ಪ್ರತಿನಿಧಿಸುವ ಅರ್ಹತೆ ದೊರೆಯಿತು. ಜಿಂಬಾಬ್ರೆಯಲ್ಲಿ ನಡೆದ ಮೂರು ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ ಪೀಟರ್‌ಸನ್, ೧೦೪ ಸರಾಸರಿಯೊಂದಿಗೆ ಸ್ಕೋರ್ ಮಾಡಿದ. ಆ ಸಾಧನೆಯೇ ೨೦೦೫ ಜನವರಿಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಪ್ರಾರಂಭವಾಗಲಿದ್ದ ಏಕದಿನ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಟ್ಟಿತು. ಆದರೆ ಅಣಕವೆಂದರೆ, ಯಾವ ದೇಶವನ್ನು ಪ್ರತಿನಿಧಿಸಬೇಕು, ಯಾವ ದೇಶದ ಜೆರ್ಸಿ ಧರಿಸಬೇಕು, ಯಾವ ದೇಶದ ಕೀರ್ತಿಪತಾಕೆಯನ್ನು ಹಾರಿಸಬೇಕು ಎಂದು ಕನಸುಕಂಡಿದ್ದನೋ ಅದೇ ದೇಶದ ವಿರುದ್ಧ ಆಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ನಮ್ಮ ವೀರೇಂದ್ರ ಸೆಹವಾಗ್ ಚೊಚ್ಚಲ ಟೆಸ್ಟ್ ಶತಕ ಗಳಿಸಿದ್ದ ಬ್ಲೋಮ್‌ಫಾಂಟೇನ್‌ನಲ್ಲಿ ೨೦೦೫, ಫೆಬ್ರವರಿ ೨ರಂದು ಎರಡನೇ ಏಕದಿನ ಪಂದ್ಯವಾಡಲು ಪೀಟರ್‌ಸನ್ ಮೈದಾನಕ್ಕಿಳಿದ. ಮುಂದಿನದ್ದು ಇತಿಹಾಸ. ಮೊದಲ ಶತಕ ದಾಖಲಿಸಿದ. ಸೆಂಚುರಿ ಬಾರಿಸಿದ ಖುಷಿಯಲ್ಲಿ ಆಶ್ರಯ, ಅವಕಾಶ ನೀಡಿದ ಇಂಗ್ಲೆಂಡನ್ನು ಮರೆಯಲಿಲ್ಲ. ಹೆಲ್ಮೆಟ್‌ನಲ್ಲಿದ್ದ ಇಂಗ್ಲೆಂಡ್ ಚಿಹ್ನೆಗೆ ಮುತ್ತಿಕ್ಕಿ ತನ್ನ ನಿಷ್ಠೆಯನ್ನು ತೋರಿಸಿದ. ಮೂರು ಸಿಂಹಗಳು ಹಾಗೂ ತನ್ನ ಜೆರ್ಸಿಯ ಮೇಲಿದ್ದ ಇಂಗ್ಲೆಂಡ್ ತಂಡದ ನಂಬರನ್ನು ತೋಳಿನ ಮೇಲೆ ಹಚ್ಚೆ(tattoo) ಹಾಕಿಸಿಕೊಂಡ.
ಆಗಲೇ ದಕ್ಷಿಣ ಆಫ್ರಿಕಾ ರೊಚ್ಚಿಗೆದ್ದಿದ್ದು.
ಬ್ಲೋಮ್‌ಫಾಂಟೇನ್‌ನಲ್ಲಿ ಚೊಚ್ಚಲ ಸೆಂಚುರಿ ಹೊಡೆದಾಗ ಎದ್ದುನಿಂತು ಚಪ್ಪಾಳೆ ತಟ್ಟಿದ್ದ ಜನ, ವಾಂಡರರ್‍ಸ್ ಹಾಗೂ ಜೋಹಾನ್ನೆಸ್‌ಬರ್ಗ್‌ನಲ್ಲಿ ಪೀಟರ್‌ಸನ್ ಮೈದಾನಕ್ಕಿಳಿದಾಗ “ದೇಶದ್ರೋಹಿ..ದೇಶದ್ರೋಹಿ…ದೇಶದ್ರೋಹಿ” ಎಂದು ಹಳಿಯಲು ಆರಂಭಿಸಿದರು. ಆದರೆ ಇದಾವುದೂ ಪೀಟರ್‌ಸನ್‌ಗೆ ಅಡ್ಡಿಯಾಗಲಿಲ್ಲ. ಧೃತಿಗೆಡುವ ಬದಲು ದೇಶದ್ರೋಹಿ ಎಂಬ ಕೂಗನ್ನು ಸವಾಲಾಗಿ ಸ್ರೀಕರಿಸಿದ ಆತ ಮತ್ತೆರಡು ಸೆಂಚುರಿ ಬಾರಿಸಿದ. ಸರಣಿ ಕೊನೆಗೊಂಡಾಗ ೧೫೧.೬೩ ಸರಾಸರಿಯೊಂದಿಗೆ ೪೫೪ ರನ್ ಹೊಡೆದಿದ್ದ. ನಿರೀಕ್ಷೆಯಂತೆಯೇ ಸರಣಿ ಪುರುಷೋತ್ತಮನಾದ. “ಅವತ್ತು ಉನ್ಮತ್ತ ಜನರು ‘ದೇಶದ್ರೋಹಿ..ದೇಶದ್ರೋಹಿ’ ಎಂದು ಕೂಗುತ್ತಿರುವಾಗ ಅಮ್ಮ ಅಳುತ್ತಿದ್ದಳು, ನನ್ನ ಕುಟುಂಬವೇ ದಿಗ್ಬಮೆಗೊಳಗಾಗಿತ್ತು” ಎನ್ನುತ್ತಾನೆ ಪೀಟರ್‌ಸನ್.
ಇತ್ತ ಪೀಟರ್‌ಸನ್‌ನನ್ನು ಇಂಗ್ಲೆಂಡ್‌ಗೆ ಬಿಟ್ಟುಕೊಟ್ಟಿದ್ದಕ್ಕಾಗಿ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರರು ಪ್ರ್ಚಾತ್ತಾಪ ವ್ಯಕ್ತಪಡಿಸುತ್ತಿದ್ದಾರೆ. “ಅಂದು ಪೀಟರ್‌ಸನ್ ಲೆಯಿಂದ ನೇರವಾಗಿ ನಮ್ಮ ಬೆರಿಯಾ ರೋವರ್‍ಸ್ ಕ್ಲಬ್‌ಗೆ ಆಗಮಿಸಿದ. ನಾನು ಮೂರನೇ ಕ್ರಮಾಂಕದಲ್ಲಿ ಬ್ಯಾಂಟಿಂಗ್‌ಗೆ ಇಳಿದೆ. ನಾಲ್ಕನೇ ಕ್ರಮಾಂಕದಲ್ಲಿ ಪೀಟರ್‌ಸನ್ ಬ್ಯಾಟಿಂಗ್‌ಗೆ ಬರುವ ಮೊದಲೇ ೭೦ ರನ್ ಹೊಡೆದಿದ್ದೆ. ಆದರೆ ಆತ ನನಗಿಂತಲೂ ಮೊದಲು ಶತಕ ಪೂರೈಸಿದ. ನಿಜಕ್ಕೂ ”Unbelievable” ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎರ್ರೋಲ್ ಮಾರಿಸ್ ನೆನಪಿಸಿಕೊಳ್ಳುತ್ತಾರೆ.
ಇದೇನೆ ಇರಲಿ. ಮುಂದಿನದ್ದು ಮೊನ್ನೆತಾನೇ ಮುಕ್ತಾಯಗೊಂಡ ಪ್ರತಿಷ್ಠಿತ ಆಷಸ್ ಸರಣಿ. ಇಂಗ್ಲೆಂಡ್‌ನ ಆಯ್ಕೆದಾರರಿಗೆ ಬೇರೆ ದಾರಿಯೇ ಇರಲಿಲ್ಲ. ಕೂದಲಿಗೆ ವಿಚಿತ್ರವಾಗಿ ಬಣ್ಣಹಾಕಿಸಿಕೊಳ್ಳುವ ೨೫ ವರ್ಷದ ಕೆವಿನ್ ಪೀಟರ್‌ಸನ್‌ನನ್ನು ಆಯ್ಕೆ ಮಾಡಲೇಬೇಕಾ ಗಿತ್ತು. ಸಹಜವಾಗಿಯೇ ಗ್ರಹಾಂ ಥೋರ್ಪ್ ಬದಲು ಪೀಟರ್‌ಸನ್ ಆಯ್ಕೆಯಾದ. ಟೆಸ್ಟ್‌ಗೂ ಮೊದಲು ನ್ಯಾಟ್‌ವೆಸ್ಟ್ ಏಕದಿನ ಸರಣಿ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಹೀನಾಯ ಸೋಲು. ಎರಡನೇ ಪಂದ್ಯಕ್ಕೂ ಅದೇ ಗತಿ ಎದುರಾಗಿತ್ತು. ಆದರೆ ೬೫ ಬಾಲುಗಳಲ್ಲಿ ೮ ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳೊಂದಿಗೆ ೯೧ ರನ್ ಬಾರಿಸಿದ ಪೀಟರ್‌ಸನ್ ವಿಶ್ರಚಾಂಪಿಯನ್ನರ ವಿರುದ್ಧ ಇಂಗ್ಲೆಂಡ್‌ಗೆ ೩ ವಿಕೆಟ್ ಜಯ ತಂದುಕೊಟ್ಟ. ಹೀಗೆ ಪ್ರತಿ ಪಂದ್ಯಗಳಲ್ಲೂ ಸ್ಕೋರ್ ಮಾಡುತ್ತಿದ್ದ ಆತ, ಸರಣಿ ಮುಗಿದಾಗ ೧೬೨.೨೫ ಸರಾಸರಿಯನ್ನು ದಾಖಲಿಸಿದ್ದ.
ನಂತರ ಟೆಸ್ಟ್ ಸರಣಿ. ಟೆಸ್ಟ್‌ನಲ್ಲೂ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸೋಲು. ಎರಡನೇ ಪಂದ್ಯದಲ್ಲಿ ಪೀಟರ್‌ಸನ್, ಫ್ಲಿಂಟಾಫ್ ಜತೆಯಾಟ. ಇಂಗ್ಲೆಂಡ್‌ಗೆ ರೋಚಕ ಗೆಲುವು. ಮೂರನೆಯ ಪಂದ್ಯ ದಲ್ಲಿ ಕಡೆಯ ನಾಲ್ಕು ಓವರ್‌ಗಳಲ್ಲಿ ಕೊನೆಯ ವಿಕೆಟ್ ತೆಗೆಯಲಾರದೆ ಡ್ರಾಗೆ ತೃಪ್ತಿ. ನಾಲ್ಕನೇ ಪಂದ್ಯದಲ್ಲಿ ಫ್ಲಿಂಟಾಫ್ ಅಬ್ಬರ. ಇಂಗ್ಲೆಂಡ್‌ಗೆ ಗೆಲುವು. ಹೀಗೆ ಇಂಗ್ಲೆಂಡ್ ೨-೧ ಮುನ್ನಡೆ ಸಾಧಿಸಿತು. ಆದರೆ ಕೊನೆಯ ಪಂದ್ಯವನ್ನು ಗೆದ್ದು, ಸರಣಿಯನ್ನು ಸಮಮಾಡಿಕೊಂಡು ಆಷಸ್ ಕಪ್ಪನ್ನು ತನ್ನ ಬಳಿಯೇ ಉಳಿಸಿಕೊಳ್ಳುವ ಎಲ್ಲ ಅವಕಾಶವೂ ಆಸ್ಟ್ರೇಲಿಯಾಕ್ಕಿತ್ತು. ಹಾಗಾಗಿ ಎಲ್ಲರ ಕಣ್ಣೂ ಕೊನೆಯ ಪಂದ್ಯದ ಮೇಲಿತ್ತು. ಮಳೆ ಕಣ್ಣಾಮುಚ್ಚಾಲೆ ಆಡತೊಡಗಿತು. ಆದರೂ ಪಟ ಪಟನೆ ಉದುರುತ್ತಿದ್ದ ವಿಕೆಟ್‌ಗಳು ಪಂದ್ಯಕ್ಕೆ ಜೀವ ತಂದುಕೊಟ್ಟಿದ್ದವು. ಅದರಲ್ಲೂ ಎರಡನೇ ಇನಿಂಗ್ಸ್‌ನಲ್ಲಿ ಮೆಗ್ರಾತ್-ಶೇನ್‌ವಾರ್ನ್ ದಾಳಿಗೆ ತತ್ತರಿಸಿ ೧೨೫ ರನ್‌ಗಳಿಗೆ ೫ ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್, ಸೋತು ಆಷಸ್ ಕಪ್ಪನ್ನು ಕಳೆದುಕೊಳ್ಳುವ ಅಪಾಯದಲ್ಲಿತ್ತು. ಆಗ ಮೈದಾನಕ್ಕಿಳಿದವನೇ ಕೆವಿನ್ ಪೀಟರ್‌ಸನ್. ಅದೆಂಥ ಕ್ರೂರ ಸನ್ನಿವೇಶವೆಂದರೆ ಒಂದು ವೇಳೆ ರನ್ ಹೊಡೆದು ಪಂದ್ಯವನ್ನು ಉಳಿಸಿದರೆ ಹೀರೊ, ವಿಕೆಟ್ ಕಳೆದುಕೊಂಡರೆ ಖಳನಾಯಕನಾಗ ಬೇಕಾಗಿತ್ತು. ಮೆಗ್ರಾತ್ ಎಸೆದ ಮೊದಲ ಬಾಲು ಕೂದಲೆಳೆಯಂತರದಲ್ಲಿ ಗ್ಲೋವ್ಸ್‌ನಿಂದ ಹೊರನಡೆದು ಪೀಟರ್‌ಸನ್‌ನ ಭುಜಕ್ಕೆ ತಾಕಿ ಕೀಪರ್ ಗಿಲ್‌ಕ್ರಿಸ್ಟ್ ಕೈಸೇರಿತು. ಒಂದು ವೇಳೆ ಗ್ಲೋವ್ಸ್‌ಗೆ ತಗುಲಿದ್ದರೆ…? ಮೆಗ್ರಾತ್‌ಗೆ ಹ್ಯಾಟ್ರಿಕ್, ಇಂಗ್ಲೆಂಡ್‌ಗೆ ಸೋಲು, ಆಷಸ್ ಆಸ್ಟ್ರೇಲಿಯಾ ಪಾಲು! ಅಷ್ಟೇಕೆ, ಶೇನ್‌ವಾರ್ನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ನೀಡಿದ ಕ್ಯಾಚನ್ನು ಗಿಲ್‌ಕ್ರಿಸ್ಟ್ ಹಿಡಿದಿದ್ದರೆ ಅಥವಾ ಕೀಪರ್ ಗ್ಲೋವ್ಸ್‌ಗೆ ತಾಕಿ ಸಿಡಿದ ಚೆಂಡನ್ನು ಹೇಡನ್ ಹಿಡಿದಿದ್ದರೆ ಪೀಟರ್ ಸನ್ ಮತ್ತೂ ಸೊನ್ನೆಗೆ ಔಟಾಗುತ್ತಿದ್ದ. ಆದರೆ ಅದೃಷ್ಟ ಖುಲಾಯಿಸಿತ್ತು. ಸಂಜೆ ನಾಲ್ಕರ ವೇಳೆಗೆ ಔಟಾಗುವ ಮೊದಲು ೧೫ ಬೌಂಡರಿ ಹಾಗೂ ೭ ಸಿಕ್ಸರ್‌ಗಳೊಂದಿಗೆ ೧೫೮ ರನ್ ಹೊಡೆದಿದ್ದ ಪೀಟರ್‌ಸನ್.
ಇಂಗ್ಲೆಂಡ್ ೩೦೦ರ ಗಡಿ ದಾಟಿತ್ತು. ೧೯೮೬ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ಆಷಸ್ ಸರಣಿಯನ್ನು ಜಯಿಸಿದೆ. ಅದರೊಂದಿಗೆ ಕೆವಿನ್ ಪೀಟರ್‌ಸನ್ ಎಂಬ ಹೊಸ ತಾರೆಯೂ ಹೊರಹೊಮ್ಮಿದ್ದಾನೆ. ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ನೆರೆದಿದ್ದ ೨೩ ಸಾವಿರ ಜನರು ಪೀಟರ್‌ಸನ್ ಜಪ ಮಾಡಿದ್ದಾರೆ. ‘We only wish you were English” ಎಂದು ಅಕ್ಕರೆಯಿಂದ ಹೇಳುತ್ತಿದ್ದಾರೆ. ಇಡೀ ದೇಶವೇ ಹೆಮ್ಮೆ ಪಡುತ್ತಿದೆ.
ಖಂಡಿತಾ ೪೦೨ ರನ್ ಹಾಗೂ ೨೪ ವಿಕೆಟ್ ಗಳಿಸಿರುವ ಆಂಡ್ರ್ಯೂ ಫ್ಲಿಂಟಾಫ್ ಸಾಧನೆ ಪೀಟರ್‌ಸನ್‌ಗಿಂತಲೂ ಹಿರಿದು. ಆದರೆ ಖುಷಿ ಕೊಡುವುದು ಪೀಟರ್‌ಸನ್‌ನ ಹುಂಬು, ಹುಚ್ಚು ಬ್ಯಾಟಿಂಗ್. ಜತೆಗೆ ಆಸ್ಟ್ರೇಲಿಯಾವೆಂಬ ತಂಡ, ಟೈಗರ್‌ವುಡ್ಸ್ ಎಂಬ ಗಾಲ್ಫ್ ಆಟಗಾರ, ಮೈಕೆಲ್ ಶೂಮಾಕರ್ ಎಂಬ ಫಾರ್ಮುಲಾ-೧ ಡ್ರೈವರ್‌ಗಳು ‘ಅದಮ್ಯ’ (Invincible) ಎಂಬ ವಿಧಿತ ಸಂಗತಿಗಳು ಸುಳ್ಳಾಗಿ ಹೊಸ ಪ್ರತಿಭೆಗಳು ಹೊರಬರುತ್ತಿರುವುದು.
ಇದು ಚಾಲ್ತಿಯಲ್ಲಿರಲಿ.
ಪ್ರತಾಪ್ ಸ್ಹಿಮ

ಕೋಡಗನ ಕೋಳಿ ನುಂಗಿತ್ತ

ಕೋಡಗನ ಕೋಳಿ ನುಂಗಿತ್ತ
ಕೇಳವ್ವ ತಂಗಿ
ಕೋಡಗನ ಕೋಳಿ ನುಂಗಿತ್ತ

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತಾರದವಳ ಮದ್ದಿಲೆ ನುಂಗಿತ್ತ!

ಒಳ್ಳು ಒನಕೆಯ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲ್ಲಿರುವ ಅಣ್ಣನನ್ನೇ ಮನೆಯ ನುಂಗಿತ್ತ!

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಲ್ಲಿರುವ ಅಣ್ಣನನ್ನೆ ಮಣಿಯು ನುಂಗಿತ್ತ!

ಗುಡ್ಡ ಗವಿಯನ್ನು ನುಂಗಿ
ಗವಿಯು ಇರುವೆಯ ನುಂಗಿ
ಗೋವಿಂದ ಗುರುವಿನ ಪಾದ ನನ್ನನ್ನೇ ನುಂಗಿತ್ತ -ತಂಗಿ
ಕೋಡಗನ ಕೋಳಿ ನುಂಗಿತ್ತ

ಶನಿವಾರ, ಆಗಸ್ಟ್ 7, 2010

ನೀ ಬಾರದೇ ಹೋದರೆ

ಎಲೆ ಕೆಂಚಿ ತಾರೆ ನಮ್ ಮನೆ ತನಕ ಬಾರೆ
ನೀ ಬಾರದೇ ಹೋದರೆ
ನೀ ಬಾರದೇ ಹೋದರೆ
ನಾ ಕೆರೆ ಬಾವಿ ಪಾಲೆ||

ಕಲ್ಲು ಕಟ್ಟಿದ ಬಾವಿ ಬೆಲ್ಲದ ಸೋಪಾನ
ಊರೆಲ್ಲ ಬಳಸೋದು ಆ ನೀರೆ
ಊರೆಲ್ಲ ಬಳಸೋದು ಆ ನೀರೆ
ಬಾರೇ ಮನೆಗೋಗೋಣ||

ಅತ್ತಲ್ಲಿಂದ ನೀನು ಬಂದೆ ಇತ್ತಲ್ಲಿoದ ನಾನು ಬಂದೆ
ನಿನ್ನ ಮೋರೆ ಮುಸುಕ ತೆಗೆಯೇ
ನಿನ್ನ ಮೋರೆ ಮುಸುಕ ತೆಗೆಯೇ
ಮೋರೆಯ ನೋಡೋಣ||

ನೆನ್ನಿಂದ ಮೊನ್ನಿಂದ ನಿನ್ನ ಮ್ಯಾಗಳ ಗ್ಯಾನ
ಸುಣ್ಣದ ನೆಪ ಮಾಡಿ ಸುಳಿದಾಡು
ಮನೆ ಮುಂದೆ ಸುಣ್ಣದ ನೆಪ ಮಾಡಿ ಸುಳಿದಾಡು
ಬಾರೇ ಮನೆಗೋಗೋಣ||

ನಡುವಿಗೆ ವಡ್ಡ್ಯಾಣ ಮಾಡಿಸಿ ಕೊಡುವೆ
ಕಾಲoದಿಗೆ ಗೆಜ್ಜೆ
ಬೆಳ್ಳಿ ಕಾಲoದಿಗೆ ಗೆಜ್ಜೆ
ಬಾರೇ ಮನೆಗೋಗೋಣ||

ಮಾಗಿ ಹೊಡೆದಾರೆ ಹೆoಟೆ ಜಾಲಿ ಹೊಡೆದಾರೆ ಕೆಚ್ಚೆ
ಗಲ್ಲ ಕಡಿದರೆ ಬೆಲ್ಲದಚ್ಚೆ
ನಿನ್ನ ಗಲ್ಲ ಕಡಿದರೆ ಬೆಲ್ಲದಚ್ಚೆ
ಬಾರೇ ಮನೆಗೋಗೋಣ||

ಅಕ್ಕ ತಂಗ್ಯಾರೂ ನಾವು ರೊಕ್ಕ ಕೇಳೋರಲ್ಲ
ನನ್ನ ಗ್ಯಾನ ಬಿತ್ತಲ್ಲೋ ನಿನ್ನ ಮೇಲೆ
ನನ್ನ ಗ್ಯಾನ ಬಿತ್ತಲ್ಲೋ ನಿನ್ನ ಮೇಲೆ
ಬಾರೋ ಮನೆಗೋಗೋಣ

ನಮ್ಮೂರ ಮಳೆಗಾಲದ ನೆಟ್ಟಿಯ ಒಂದು ನೋಟ ......