ಪುಟಗಳು

ಭಾನುವಾರ, ಮೇ 1, 2011

Water Therapy

One simple cleansing method for both body and ಮೈಂಡ್

Water therapy is a simple method to cleanse both the body and mind from toxins. Doing water therapy one gets more benefits than one can imagine. At the physical level, various diseases are healed and at the mind level many negative habits just fade away.

The simple method that we are going to tell you will also cleanse your mind not physically but through intellect. Like the body the mind is also affected by internal as well as external toxins. The internal toxins in the mind arise through thoughts of every day actions and external toxins come from outside as stimuli from the environment. It is amazing how a simple method will cleanse both mind and body.
What is Water Therapy?

Drinking 1.5 liters of water daily first thing in the morning is water therapy. 1.5 liters is equal to 3.3 pints or 0.4 gallons of water or six and a half measuring cups (not tea-cups) of water. (Details in the next few pages).
Diseases healed by Water Therapy It is impossible to list them completely. It heals a number of ailments. These are some of the benefits that we experienced and some were reported by our friends.
Constipation, Headache, Anemia, Rheumatism, Organ Failures, General Paralysis, Over Weight, Arthritis, Improved Sexual Performance, Sinusitis, Tachycardia, Giddiness, Cough, Morning Sickness, Asthma, Bronchitis, Meningitis, Kidney Stones, Gall Stones, Dysentery, Leukemia, Hot Flashes Hyper Acidity, Gastro-enteritis, Eye Diseases, Wrinkles in Skin, Diabetes, Laryngitis, Breast Cancer, Prostrate Cancer, Colon Cancer, Esophagus Cancer, Uterine Cancer, Liver Cancer, Lung Cancer, Pre-cancerous Oral Lesions, Ovarian Cyst, High Cholesterol, Ophthalmic Hemorrhage & Opthalmia (red eye), Irregular Menstruation, Rectal Prolapse, Urogenital Diseases, Blood Pressure/Hyper Tension, Pulmonary, Tuberculosis (TB).
Remember, most of these diseases are healed not with water therapy alone but in combination with the earth therapy (Diet) and/or the other four ಎಲೆಮೆಂತ್ಸ್

In the previous page we read that Healer Arasan has given the essence of five steps for healing in his quote. Observe the words of this ancient quote which has tremendous health value.
These five steps are like the five elements (ingredients) of nature and also of our body. Using these five steps we are integrating the five elements in our body for health of the body and mind in our daily life.
He recommends getting up early in the morning and doing water therapy every day. Water element is recommended as the first step because our body is really a bag of water - 73% water. This means a 200 pound (100 kg) person really has 146 pounds (73 kg) of water. No wonder water is the best cleaning agent because you are replacing every day fresh water in your body like changing water in a fish tank or an aquarium. (http://www.sakthifoundation.org/water-cleanse.htm)

ಸೋಮವಾರ, ಫೆಬ್ರವರಿ 28, 2011

ಮಂಗಳವಾರ, ಫೆಬ್ರವರಿ 22, 2011

ಗೆಳತಿ ನಿ ಇಟ್ಟುಬಿಡು ನಗುವಿನ ಅಂಗಡಿ ........


ಗೆಳತಿ ನಿ ಇಟ್ಟುಬಿಡು ನಗುವಿನ ಅಂಗಡಿ
ನಾ ಕೊಳ್ಳಬಲ್ಲೆ ನನ್ನ ಹೃದಯವ ಅಡವಿಟ್ಟು
ನಿನ್ನ ನಗುವಿನ ಪ್ರತಿ ಸಾಲು ಸಾಲು ..........

ಚೆಲುವೆ ನಿನಾಡುವಾಗ ಮುತ್ತಿನಂತ ಮಾತು
ಅನ್ನಿಸುತ್ತದೆ ಕತ್ತಲಾಗದಿರಲಿ ಇ ಹೊತ್ತು ....

ಈ ಪಠೄ ಪುಸ್ತಕದ ಸುತ್ತ ಪ್ರೇಮ ಪತ್ರ
ಕಾರಣ ನನ್ನ ಮನದ ದಾರಿ ತುಂಬಾ ನಿನ್ನದೇ

ಬಿತ್ತಿ ಚಿತ್ರ ............. ........

ಬುಧವಾರ, ಫೆಬ್ರವರಿ 16, 2011

ನಾಡಿನಲ್ಲಿ ಗೂಡು ಇಲ್ಲದಾಗಿತ್ತು .......


ಕಾಡ ನಾಡಿನಲ್ಲಿ ಆ ಜೋಡಿ ಹಕ್ಕಿಗಳು
ಕಳಯೂತಿದ್ದವು ಕಲೆತು ದಿನಗಳ ......

ಮತ್ತ್ಯಾಕೋ ಅಂದು ಬಂದಿತ್ತು ಗತ್ತು
ಮೊದಲ ಹಕ್ಕಿ ಹಾರುತಿದೆ ಅತ್ತ
ಇತ್ತ ಸುತ್ತ ಮುತ್ತ ..........

ಇನ್ನಸ್ಟು ಕಾಳು ಹೆಕ್ಕುವ ತವಕದತ್ತ.....
ಮತ್ತೆ ಕಾಣುತಿದೆ ಬಯಲು ದಾರಿ ಅತ್ತ .......

ಅದೇನೋ ಯಾಕೋ ಹೆಚ್ಚು ಕೂಳ ಕೂಡಿರುವ ಆಸೆ
ಮತ್ತಷ್ಟು ದೂರ ಮತ್ತಷ್ಟು ದೂರ ಹಾರುತಿದೆ
ಗೂಡ ಬಿಟ್ಟು ಬಲು ದೂರ ......

ತಿರುಗಿ ನೋಡಲೇ ಇಲ್ಲ ಮರೆತಿರುವ ನಾಡ
ಮತ್ತಾರು ಇರಲಿಲ್ಲ ಅದರ ಸಂಗಡ........

ಕಾಳೆನೋ ಸಿಕ್ಕಿತ್ತು ಒಂಟಿ ಹಕ್ಕಿ ಎದಯಲಿ ನೋವಿತ್ತು
ಮತ್ತೆ ಗೂಡ ಸೇರುವ ತವಕದಲ್ಲಿ ಅದು ಇತ್ತು ..........

ಬಂದ ಹಾದಿಯಲಿ ಸಾಗಿತ್ತು
ಆದರಲ್ಲಿ ನಿರಾಶೆ ಕಾದಿತ್ತು.........

ಕಾಡ ನಾಡಿನಲ್ಲಿ ಗೂಡು ಇಲ್ಲದಾಗಿತ್ತು
ಕಳೆದ ಸಿಹಿ ಗಳಿಗೆಯ ನೆನಪಾಗಿ
ಹಕ್ಕಿ ಮತ್ತೆ ಮತ್ತೆ ಬಿಕ್ಕಿ ಅತ್ತಿತ್ತು
ಹಕ್ಕಿ ಮತ್ತೆ ಬಿಕ್ಕಿ ಅತ್ತಿತ್ತು.........

ಮಂಗಳವಾರ, ಫೆಬ್ರವರಿ 8, 2011

ಬಾಲ್ಯದ ನೆನಪುಗಳನೆಲ್ಲ ಹಂಚಿ ಕೊಂಡು


ಅಪ್ ಸ್ಟಂಪ್ ನ ನೇರ ಬರುತ್ತಿದ್ದ ಚೆಂಡಿನ ದಿಕ್ಕನ್ನು ತನ್ನ ಬ್ಯಾಟಿನ ಮೂಲಕ ಲೆಗ್ ಸೈಡಿಗೆ ಗೆ ತಿರುಗಿಸಿ ಸಿಕ್ಸ್ಆಗಿ ಮಾರ್ಪಡಿಸುತಿದ್ದ ಅ ನನ್ನ ಗೆಳೆಯ ತನ್ನ ಬದುಕಿನ ಗತಿಯನ್ನೇ ತಿರುಗಿಸಿ ಕೊಳ್ಳುತ್ತಾನೆ ಎಂದು ನಾ ಎಣಿಸಿರಲಿಲ್ಲ ..ಇ ಬದುಕೇ ಹೀಗೆ ನಾವೇ ನಾವಿಕರಾಗುತ್ತೇವೆ ಮನಸಿನ ಕೈಗೆ ಬುದ್ದಿಯನ್ನು ಕೊಟ್ಟು ಸುಮ್ಮನಿದ್ದರೆ ನಾವೆಲ್ಲೋ ಸುಳಿಗೆ ಸಿಕ್ಕಿ ಬದುಕಿನ ಸುಂದರ ಕತೆಯನ್ನು ದುಖಂತದೊಂದಿಗೆ ಕೊನೆಗೊಳಿಸುತ್ತೇವೆ....
೫ರಲ್ಲಿ ನನ್ನ ಬೆಂಚಿಗೆ ಬಂದ ಆ ಕಪ್ಪು ಬಣ್ಣದ ನನ್ನ ಗೆಳೆಯ ಬಹಳ ಚುರುಕಾಗಿದ್ದ ..ತನ್ನ ಸುಂದರ ಅಕ್ಷರದಿಂದ ಬರಯೂತಿದ್ದ ಅವನು ನನಗೆ ಬಲು ಅಚ್ಚು ಮೆಚ್ಚು ...ತನ್ನ ಮನೆಯ ಮತ್ತು ಮನದ ಕತೆಗಳನ್ನು ನನ್ನೊಂದಿಗೆ ತೆರೆದಿದುತಿದ್ದ ಅವನು ಮಾತಿನ ಮಲ್ಲನಾಗಿದ್ದ ...ಸದಾ ಹಸನುಖಿಯಾದ ಅವನಿಗೆ ಕ್ರಿಕೆಟ್ನಲ್ಲಿ ಎಲ್ಲಿಲ್ಲದ ಆಸಕ್ತಿ ..ಆಟದ ಬಿಲ್ಲಆಯಿತು ಎಂದರೆ ನಾವೆಲ್ಲ ಕ್ರಿಕೆಟ್ ಆಡಲು ರೆಡಿಯಗುತಿದ್ದೆವು..ನಮ್ಮೊಳಗೇ ಟೀಂ ಮಾಡಿಕೊಳ್ಳುತಿದ್ದೆವು ...ಅಸ್ತು ಚೆನ್ನಾಗಿ ಆಡಲು ಬರದ ನಾನು ಯಾವಾಗಲು ನನ್ನ ಪ್ರೀತಿಯ ಗೆಳೆಯನ ಟೀಮ್ನ ಪಾಲಗುತಿದ್ದೆ ...ಅಂತು ಇಂತೂ ಬಹಳ ಕಷ್ಟ ಪಟ್ಟು ೭ನೆ ತರಗತಿ ಪಾಸಾದ ನಾವು ಹೈಸ್ಕುಲಗೋಸ್ಕರ ಬೇರೆ ಬೇರೆ ಹೈಸ್ಕೂಲ್ ಸೇರಿದರೆ ನನ್ನ ಗೆಳೆಯ ತನ್ನ ವಿದ್ಯಬ್ಯಾಸಕ್ಕೆ ವಿದಾಯ ಹೇಳಿ ಮನೆಯ ಬಡತನದ ಶಿಕ್ಷೆ ಎಂಬಂತೆ ಹೋಟೆಲು ಕೆಲಸಕ್ಕಾಗಿ ಬೆಂಗಳೂರು ಸೇರಿದ್ದ
ಮತ್ತೆ ಎಂದು ಬೇಟಿಯಾಗದ ನಾವು ಹದಿನಾಲ್ಕು ವರುಷಗಳ ನಂತರ ಅವನನ್ನು ನೋಡುವ ಅವಕಾಶ ಒದಗಿ ಬಂತು ಆ ದಿನ ನಾ ಊರಿಗೆ ಹೋದಾಗ ನನ್ನ ಮತ್ತೊಬ್ಬ ಸ್ನೇಹಿತನೊಬ್ಬನಿಂದ ಆ ನನ್ನ ಬಾಲ್ಯದ ಗೆಳೆಯ ಉರಿನಲ್ಲಿರುವುದು ತಿಳಿಯಿತು ಮತ್ತೆ ಅರೆ ಕ್ಷಣದಲ್ಲಿ ಅವನ ಬಾಯಿಂದಲೇ ಆಘಾತದ ಸುದ್ದಿಯು ಸಹ ಹೊರ ಬಿತ್ತು..ನನ್ನ ಜೀವದ ಗೆಳೆಯ ವಾಸಿಯಾಗದ ಖಾಯಿಲೆ ಒಂದಕ್ಕೆ ಬಲಿಯಾಗಿದ್ದ ಅದು ಮಹಾ ಮಾರಿ ಎಡ್ಸ್ ಅಂದು ತಿಳಿದಾಗ ಒಮ್ಮೆ ಶಾಕ್ ಅದವನತೆ ನಿಂತು ಬಿಟ್ಟೆ ...
ಕೆಲಸಕ್ಕಾಗಿ ಉರು ಬಿಟ್ಟ ಗೆಳೆಯ ಹೋಟೆಲಿನಲ್ಲಿ ಕೆಲಸ ಮಾಡಿ ನಂತರದ ದಿನಗಳಲ್ಲಿ ಅವನೇ ಸ್ವತಹ ಹೋಟೆಲನ್ನು ತೆರೆದಿದ್ದ ..ಕ್ರಮೇಣವಾಗಿ ಅದ್ರಲ್ಲಿ ಯಶಸ್ಸನ್ನು ಸಾದಿಸಿದ ...ದಿನ ಕಳೆದಂತೆ ಕುಡಿದಂತ ವ್ಯಸನಕ್ಕೆ ಬಿದ್ದು ಕೆಟ್ಟ ಚಟಗಳ ದಾಸನಾಗಿದ್ದ........
ಅವನನ್ನು ನೋಡಬೇಕು ಅವನೊಂದಿಗೆ ಮಾತನಾಡಬೇಕು ನಾವಿಬ್ಬರು ಮಾಮೂಲಾಗಿ ಕುರುತಿದ್ದ ಅ ಮರದ ಕೆಳಗೆ ಕುಳಿತು ಬಾಲ್ಯದ ನೆನಪುಗಳನೆಲ್ಲ ಹಂಚಿ ಕೊಂಡು ನಗಬೇಕು...ಎನ್ನುತಿದ್ದ ನನಗೆ ಅದಕ್ಕೆ ವಿರುದ್ದವಾದ ಸನ್ನಿವೇಶವನ್ನು ಸೃಸ್ಟಿಸಿದ್ದ ಆ ಬಗವಂತ.....ಮತ್ಯಾಕೆ ಆ ನೀಲಿ ಕಂಗಳ ಹುಡುಗ ತಪ್ಪನ್ನು ಮಾಡಿದ ತನ್ನ ಜೀವನದ ಚಿಗುರನ್ನೇ ಕತ್ತರಿಸಿ ಕೊಂಡಿದ್ದ..ಅದ್ಯಾಗೋ ಬಾರವಾದ ಮನಸಿಂದ ಅವನನ್ನು ನೋಡ ಹೋದ ನನಗೆ ಅವನ ತಾಯಿಯ ಕಣ್ಣಿರುಗಳ ದರ್ಶನವಾಗಿತ್ತು ...ಅವರೊಡನೆ ಆತ ಎಲ್ಲಿ ಎಂದು ಕೇಳಿದಾಗ ಅವನು ಮನೆಯ ಬದಿ ಕೋಣೆಯಲ್ಲಿ ಇರುದಾಗಿ ತಿಳಿದು ಬಂತು ಮತ್ತು ಅವನು ಯಾರನ್ನು ನೋಡಲು ಇಷ್ಟ ಪಡುದಿಲ್ಲ ಎನ್ನುದು ಸಹ ...
ಮೌನಿಯಾಗಿ ಮನೆಗೆ ಹೋರಾಟ ನನಗೆ ಅದೇ ಶಾಲೆಯ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುತಿದ್ದ ಹುಡುಗರ ದಂಡು ನನ್ನನು ನೋಡಿ ನಗುತಿದ್ದಂತೆ ಬಾಸವಾಯಿತು
(ಕಾಲ್ಪನಿಕ )

ಭಾನುವಾರ, ಫೆಬ್ರವರಿ 6, 2011

ಹೃದಯದ ಮಾತು ಕೆಳಬೇಕಂತೆ


ಗೆಳತಿ ನಿನ್ನ ಮೇಲೆ ನನಗ್ಯಾಕೋ ಗೊತ್ತಿರದ ಬಾವ ...ಮತ್ತಿನ್ನೇನೋ ಕರೆಯಲಿ ಪ್ರೀತಿ ಅನ್ನಬೆಕಸ್ಟೇ ...ನೀನು ಕೇಳಬಹುದಲ್ಲವೆ ನಿನ್ನನು ಪ್ರೀತಿಸಲು ಕಾರಣ ...ಅ ಕಾರಣಗಳಿಲ್ಲದೆ ಹುಟ್ಟಿದ್ದರಿಂದ ಇದಕ್ಕೆ ಪ್ರೀತಿ ಅಂದು ಕರೆದಿರಬೇಕು .....ಮೊನ್ನೆ ಮಳೆಗಾಲದ ಮಳೆಯಲ್ಲಿ ನೆನೆದು ಆಫೀಸಿನ ಕಸ್ಟಮರ್ ಕ್ಯಾರೆನಲ್ಲಿ ಕುಳಿತಾಗ ಅನಿರಿಕ್ಷಿತವಾಗಿ ಬಂದ ನಿನ್ನ ಆಗಮನ ಅದೇಷ್ಟು ಹಿತವಾಗಿತ್ತು ಗೊತ್ತ ......ನಿನ್ನ ಹೆಜ್ಜೆಯ ಸದ್ದುಗಳು ಮಾತ್ರ ಸಾಕು ನನ್ನ ಮನ ಪುಟ್ಟ ಮಗುವಿನಂತ್ತಾಗಲು ....ಪ್ರೀತಿಯಂದರೆ ಹಾಗೆ ಹೀಗೆ ಅಂದು ಬಾಷಣ ಬಿಗಿತಿದ್ದ ನನಗೆ ...ಅವುಗಳೆಲ್ಲವೂ ಸುಳ್ಳು ಅನ್ನಿಸತೊಡಗಿದೆ ...ಪ್ರೀತಿಗೆ ಬಾಷೆಗಲಿಲ್ಲ ಬರಹಗಳಿಲ್ಲ ....ಪ್ರೀತಿ ಹೃದಯಗಳ ಮಾತುಗಳು ಎನ್ನಬಹುದೇನೋ ಓ ಗೆಳತಿ ಕೆಲವೊಂದು ಸಲ ಹೃದಯದ ಮಾತು ಕೆಳಬೇಕಂತೆ...ಹೌದು ನಾನೀಗ ನನ್ನ ಹೃದಯದ ಮಾತು ಕೇಳುತ್ತಾ ಇದ್ದೀನಿ ಅನ್ಸುತ್ತೆ .... ನಿನಗೆ ನೆನಪಿದೆಯ ಆ ದಿನ ಸಂಜೆ ಬಸ್ ಸ್ಟ್ಯಾಂಡ್ನಲ್ಲಿ ಮುದುಕಿನ ರೋಡ್ ದಾಟಿಸಲು ಹೆಲ್ಪ್ ಮಾಡ್ತಾ ಇದ್ದೀಯಲ್ಲ ಅವಾಗಲೇ ನಿ ನನ್ನ ಹೃದಯಕ್ಕೆ ಇಷ್ಟ ಆಗಿದ್ದಿಯ ಕಾಣೆ ..ಸದಾ ಕೆಲಸದಲ್ಲಿ ತಲ್ಲಿನವಾಗಿ ತನ್ನ ಲೋಕಾನೆ ಮರೆವ ಹುಡುಗಿ ನೀನೇಕೆ ಯಾವಾಗಲು ಮೌನವನ್ನೇ ಇಷ್ಟ ಪಡ್ತಿಯಾ ....ಈಗ ನಾನು ಎಲ್ಲರಿಗಿಂತ ಮೊದಲೇ ಅಪಿಸಿಗೆ ಬರ್ತೀನಿ ಯಾಕೆ ಗೊತ್ತ ನಿನ್ನ ಬರುವಿಕೆಯನ್ನು ಕಾಯುವ ಜಾತಕ ಪಕ್ಷಿ ನಾನು..ಹೇ ಹುಡುಗಿ ನನ್ನ ಮನದ ತುಂಬಾ ನಿನ್ನದೇ ಕವಿತೆ...ಮತ್ತೆ ಮತ್ತೆ ನಿ ನನ್ನ ಎದುರು ಹಾದು ಹೋದಾಗ ನನ್ನ ಎದೆಯ ಬಡಿತ ನಿನಗೆ ಕೇಳಿಸಬಹುದೇನೋ ಅನ್ನುತ್ತ ನನ್ನಲ್ಲಿ ನಾನೇ ಮಾತಾಡಿಕೊಳುತ್ತೇನೆ...ನೀನಿದ್ದರಸ್ಟೇ ಸಾಕು ಈ ದಿನಗಳೆಲ್ಲ ಹಬ್ಬಗಳಂತೆ ಅನ್ನಿಸುತ್ತದೆ.....
ಅದ್ಯಾಕೋ ಗೊತ್ತಿಲ್ಲ ಕಾಣೆ ನಾನೀಗ ನನ್ನ ಎಲ್ಲ ಆಫೀಸಿನ ಕೆಲಸಗಳನ್ನು ಚೆನ್ನಾಗಿ ಮಾಡುತಿದ್ದೇನೆ ....ಬೆಳ್ಳು ಬೆಳಗಾದೊಡನೆ ನನ್ನವಳು ಚೆನ್ನಗಿರಲೆಂದು ಬಯಸುತ್ತೇನೆ .....ಈಗಿನ ಎಲ್ಲ ದಿನಗಳನ್ನು ನಾನು ಸಂಬ್ರಮಿಸುತಿದ್ದೇನೆ ..ಕವಿಯೊಬ್ಬ ಹೇಳುತ್ತಾನೆ "ಕುಂತರು ನಿಂತರು ನಿಂದೆ ದ್ಯಾನ ಮನಕಿಲ್ಲ ಸಮಾದಾನ" ಹಾಗೆ ಆಗಿ ಬಿಟ್ಟಿದೆ ಕಾಣೆ ನನ್ನ ಮನಸು ...
ಮತ್ತೆ ಮತ್ತೆ ನೀನ್ಯಾಕೆ ನನ್ನ ಮನಸ್ಸಿನಲ್ಲಿ ಕಾಡುತ್ತಿಯ ನಿನ್ನಲ್ಯಾಕೆ ನನ್ನಲ್ಲಿ ಒಲವು ..ಇ ವಾಸಿಯಾಗದ ಹೃದಯಾ ಬೇನೆಗೆ ಪ್ರೀತಿಯೇ ಔಷದವಂತೆ ...ನನ್ನೊಲವಿನ ಗೆಳತಿ ಮನಸಾರೆ ನಿನ್ನನ್ನು ಪ್ರೀತಿಸುತ್ತಿದ್ದೇನೆ
ನಿನ್ನ ಹೃದಯದ ಮಾತಿಗಾಗಿ ಕಾದಿರುವ
ಮೌನಿ

ಬುಧವಾರ, ಫೆಬ್ರವರಿ 2, 2011

LAMBORGHINI...............











ಒಂದು ಅಥವಾ ಎರಡು ವರ್ಷಗಳ ಹಿಂದೆ ಇರಬಹುದು ನಮ್ಮ ಮಂಗಳೂರಿನ ಬೆಡಗಿ ಹಿಂದಿ ಸಿನಿಮಾ ತಾರೆ ಶಿಲ್ಪ ಶೆಟ್ಟಿಗೆ ಅವಳ ಪ್ರಿಯಕರ ರಾಜ ಕುಂದ್ರನಿಂದ LAMBORGHINI ( ಎರಡು ಕೋಟಿ ಅರವತ್ತು ಸಾವಿರ ಅಂದಾಜು ) ಕಾರು ಉಡುಗೊರೆಯಾಗಿ ಕೊಟ್ಟ ಎನ್ನುವ ಸುದ್ದಿ ಪತ್ರಿಕೆಗಳಲ್ಲಿ ಸುದ್ದಿ ಆಗಿತ್ತು ..Automobile ಜಗತ್ತಿನಲ್ಲಿ ಮಿಂಚುತ್ತಿರುವ ಕಾರದು...ಒಂದೇ ಮಾತಿನಲಿ automobile queen ಎಂದಸ್ತೆ ಹೇಳಬಹುದೇನೋ ...ಇ ಕಾರು Ferruccio Lamborghini ಎನ್ನುವ ಇಟಲಿಯ ಇಂಜಿನಿಯರ್ ಒಬ್ಬನ ಕನಸಿನ ಕೂಸದು ೧೯೧೬ರಲ್ಲಿ ಇಟಲಿಯಲ್ಲಿ ಈತನ ಜನನವಾಯಿತು ...ಎರಡನೆಯ ಮಾಹಯುದ್ದದಲಿ ಅಲ್ಲಿನ ಎಲ್ಲರಂತೆ ಇತ ಸೇನಾಪಡೆಗೆ ಸೇರಬೇಕಾಗಿ ಬಂತು ..ಯುದ್ದ ಸಂದರ್ಬದಲ್ಲಿ ಹಾಳಗುತಿದ್ದ truck ,ಕಾರುಗಳನ್ನ ಅದೇ ಸ್ತಳದಲ್ಲಿ ರಿಪೇರಿ ಮಾಡಿ ಸೈನಿಕರಿಗೆ ನೆರವಾಗುದು ಈತನ ಕೆಲಸವಾಗಿತ್ತು ...ಆದರಲ್ಲಿ ಅಪಾರ ಪರಿಣಿತಿಯನ್ನು ಪಡೆದ ಇತ ಕೆಲವೇ ಸಮಯಗಳಲ್ಲಿ ಬಲು ಬೇಡಿಕೆಯ ಇಂಜಿನಿಯರ್ ಆಗಿ ಹೊರಹೊಮ್ಮಿದ ...ಅದ್ಯಾಗೋ ಎರಡನೆಯ ಮಹಾಯುದ್ದದ ನಂತರ ಆತನ ತವರೂರಾದ ಉತ್ತರ ಇಟೆಲಿಯಲ್ಲಿ ಒಂದು ಕಾರ ಮೋಟೊರ್ ಸೈಕಲ್ ರಿಪೈರ್ ಅಂಗಡಿಯನ್ನು ಪ್ರಾರಂಬಿಸಿದ ..ಕ್ರಮೇಣವಾಗಿ tractor ನ್ನು ತಯಾರಿಸುವಲ್ಲಿ ತನ್ನ ಉತ್ಸಹವನ್ನು ತೋರಿಸಿದ ಮತ್ತು ಅವನ ಸತತ ಪರಿಶ್ರಮದಿಂದ ಅದರಲ್ಲಿ ಯಶಸ್ಸನ್ನು ಸಾದಿಸಿದ ...ಅ ದಿನಗಳಲ್ಲಿ ಇಟಲಿಯಾ ಅರ್ಥಿಕ ವ್ಯವಸ್ತೆ ಏರು ಗತಿಯಲ್ಲಿ ಸಾಗಿತ್ತು ...ಆಗ ಅವನ ಬಳಿ ಇದ್ದ ಬೆಲೆ ಬಾಳುವ ಪೆರಾರಿ mesararti ಕಾರುಗಳು ಕೆಲವೊಂದು ಸಮಯದಲ್ಲಿ ತಾಂತ್ರಿಕ ತೊಂದರೆಗಳಿಗೆ ಒಳಗಾಗುತಿದ್ದವು ಮತ್ತು ಅದರ (ಪೆರಾರಿ 258 ) ರಿಪೇರಿಗಾಗಿ ಅಲ್ಲಿಯೇ ಇದ್ದ ಪೆರಾರಿ ಉತ್ಪಾದನ ಕಾರ್ಖಾನೆಗೆ ಕೊಂಡು ಹೋಗಿದ್ದ ಆದರೆ ಬೇರೆಯ ಕೆಲಸಗಳಲ್ಲಿ ಬ್ಯುಸಿಯಾಗಿದ್ದ enzo ferrari (founder of the ferrari )ಈತನನ್ನು ಅಲಕ್ಷಿಸಿದ್ದ ..ಅದರಿಂದ ಬೇಸತ್ತ Ferruccio Lamborghini ಪೆರಾರಿಗೆ ಸವಾಲನ್ನುವಂತೆ v12engine ತಯಾರಿಕೆಗೆ ತೊಡಗಿದ ಮತ್ತೆ ಅವನೊಂದಿಗೆ Giampaolo Dallara (who had previously worked on a Ferrari )ಕೈ ಜೋಡಿಸಿದ್ದ ಕೊನೆಗೋ ೧೯೬೩ ರ turino ಆಟೋ ಶೋವ್ನಲ್ಲಿ ಅವನ ಪ್ರಥಮ 350 GTV ಬಹಳ ಜನ ಮನ್ನಣೆಯನ್ನು ಗಳಿಸಿತ್ತು ..ಮತ್ತು ಆತನ ಹೆಸರನ್ನೇ ಆ ಕಾರಿಗೆ ಇಡಲಾಯಿತು ...ಒಮ್ಮೆ ನೋಡಿದರೆ ಇನೊಮ್ಮೆ ನೋಡಬೇಕೆನ್ನುವ ಅದರ ಬಾಡಿ structure ,ಇಂಜಿನ್ ಪವರ್ ಇಂದಿಗೂ ತನ್ನ ಹೆಸರನ್ನು ಕಾಪಾಡಿಕೊಂಡಿದೆ ....ಒಂದು ವರದಿಯ ಪ್ರಕಾರ ನಮ್ಮ ಬಾರತದಲ್ಲಿ ಎಂಟರಿಂದ ಹತ್ತು ಲಮ್ಬೋರ್ಗ್ಹಿನಿ ಕಾರುಗಳು ಇದೆಯಂತೆ .... lamborghiniಯ clutch ಖರೀದಿಸಲು ಬಂದ ಗ್ರಾಹಕರೋಬ್ಬರೊಂದಿಗೆ ಹಂಚಿಕೊಂಡ ಹರಟೆಯನ್ನು ಹೀಗೆ ಟೈಮ್ ಪಾಸಗೆ ಬರಹ ರೂಪಕ್ಕಿಳಿಸಲಾಯಿತು...ಅಂದ ಹಾಗೆ ಆ ಕಾರಿನ clutch ನ ಬೆಲೆ ಬರಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿಗಳು .....ಅಸ್ಟೊಂದು ಹಣ ಕೊಟ್ಟು ಕಾರು ಖರೀದಿಸುವ ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ ಸ್ವಾಮಿ ಆದರೆ ಆ ಪೋಂಕ ಶಿಲ್ಪನ ಹೆಣ್ಣಿನ ಹಿಂದೆ ಬಿದ್ದ ರಾಜ ಕುಂದ್ರನಿಗಂತೂ ಮಂಡಿ ಸಮ ಇಲ್ಲ ಅಕ.......................







ಬುಧವಾರ, ಜನವರಿ 26, 2011

ಮನದ ತೀರದ ತುಂಬಾ ಮರೆಯದ ಹೆಜ್ಜೆಗುರುತು!---ವಾಣಿ-ಧ್ವನಿ-Written by Vani Shetty




ನೆನಪುಗಳು!ಇವೇ ಹೊತ್ತಲ್ಲದ ಹೊತ್ತಲ್ಲಿ ಕಾಡುತ್ತವೆ.. ಮತ್ತವೇ ನೊಂದ ಮನಸ್ಸನ್ನು ಸಂತೈಸುತ್ತವೆ ಕೂಡಾ!ಅವುಗಳು ಸದಾ ನಮ್ಮ ಅದೊಂದು ಕಾಲದ…ಅನ್ನೋ ನೆನಪಿನ ಗಣಿಯ ವಜ್ರ.ಸರಿಯಾಗಿ ಏಳೆಂಟು ವರ್ಷಗಳ ಹಿಂದೆ ಹೈಸ್ಕೂಲ್ ಮುಗಿಸುವ ತರಾತುರಿಯಲ್ಲಿದ್ದೆವಲ್ಲ.ಆಗೆಲ್ಲ ನಮಗೆ ಬದುಕು ಇಷ್ಟು ಬೇಗ ಆಧುನಿಕವಾಗಿ ಬಿಡಬಹುದು ಅನ್ನೋ ಕಲ್ಪನೆಯೇ ಇದ್ದಿರಲಿಲ್ಲ.ಯಾವ ಗೋಜಲು,ಗೊಂದಲ ಗಳೇ ಇಲ್ಲದ ದಿನಗಳವು!ಸ್ಕೂಲ್ ಡೇಯ ಹಿಂದಿನ ದಿನ ನಾಟಕ ,ಡ್ಯಾನ್ಸ್ ಪ್ರಾಕ್ಟಿಸ್ ಮಾಡಿ ಶಾಲೆಯ ಹಿಂದಿದ್ದ ಮರಗಳ ಅಡಿ ಕುಳಿತು ಮಾತಾಡುವಾಗ ಬಹುಶಃ ನಮ್ಮ ನಾಲ್ವರಿಗೂ ಗೊತ್ತಿತ್ತು ಮುಂದೆ ಹೀಗೆ ಭೇಟಿ ಆಗೋದು ಕಷ್ಟ ಅಂತ.ಅಷ್ಟು ದೂರದ ಕಾಲೇಜಿಗೆ ನಮ್ಮೆಲ್ಲರ ಮನೇಲಿ ಕಳಿಸ್ತಾರೋ ಇಲ್ವೋ ಏನೇ ಆದರೂ ಸಿಗ್ತಾನೆ ಇರೋಣ ಆಯ್ತಾ ಅಂದಾಗ ಹಾಂ ಆಯ್ತು ಅದಕ್ಕೇನು ಅಂದಿದ್ದೆ..ಆಮೇಲೆ ದಿನಗಳೆಲ್ಲ ಹ್ಯಾಗೆ ಓಡಿಬಿಟ್ಟವಲ್ಲ, !ಈಗ ಕಾಡುತ್ತಿವೆ ನೆನಪುಗಳು ಸಾಯುವಷ್ಟು…!ಅಂದುಕೊಂಡಿದ್ದು ಸಾಧಿಸಿ ಸಂಪೂರ್ಣವಾಗಿ ಆಧುನಿಕತೆಯ ಗೂಡೊಳಗೆ ಬಂದ ಮೇಲೆ ಇಂದು ಎಲ್ಲವೂ ಇದೆ ಇಲ್ಲಿ ..ಸಮಯ ಮರೆಸುವ ಸ್ನೇಹಿತರು ,ಅಂತರ್ಜಾಲಗಳು, ರೆಸಾರ್ಟ್, ಗೇಮ್ಸ್,ಪಿಕ್ನಿಕ್ ,…ಇನ್ನೂ..ಆದರೆ ಬರೀ ನೂರು ಪುಟಗಳ ನನ್ನ ಹಳೆಯ ಆಟೋಗ್ರಾಫ್ ಕೊಡೊ ಅಧ್ಬುತ ಭಾವುಕತೆಯನ್ನು ಯಾವ ಆರ್ಕುಟ್, ಫೇಸ್ ಬುಕ್ ಗಳು ಕೂಡಾ ಕೊಡಲಾರವು..ಈ ಆಟೋಗ್ರಾಫ್ ನಲ್ಲಿ ರಜನಿ ಬರೆದ ಒಂದು ವಾಕ್ಯವಿದೆ “ನಮ್ಮ ಜೀವನ ಒಂದು ಬಸ್ ಪ್ರಯಾಣ ಇದ್ದ ಹಾಗೆ .ನಮ್ಮ ನಮ್ಮ ಸ್ಟಾಪ್ ಬಂದಾಗ ಇಳಿದು ಕೊಳ್ಳಲೇಬೇಕು”..ಹೇಯ್, ತಿರುಗಿ ಬಂದಿದ್ದೆನಲ್ಲಾ ನೀವೆಲ್ಲ ಇಳಿದಲ್ಲಿ ನಿಮ್ಮನ್ನು ಹುಡುಕಿಕೊಂಡು !!?ಎಲ್ಲಿದ್ರಿ ನೀವೆಲ್ಲಾ ಅಲ್ಲಿ ?ಬರೀ 4-5 ವರ್ಷದಲ್ಲೇ ನಿಮ್ಮ ಮೂರೂ ಜನರ ಮದುವೆಯಾಗಿ ಎಲ್ಲೆಲ್ಲೋ ಹೋಗಿಬಿಟ್ಟಿರಲ್ಲ..ನಿನ್ನ ಅಡ್ರೆಸ್ ,ಫೋನ್ ನಂಬರ್ ತುಂಬಾ ಹುಡುಕಿದ್ಲು.ಅಡ್ರೆಸ್ ಕೊಡಲೇ ಇಲ್ವಂತೆ ನೀನು.ಮದುವೆಗ್ ಕರಿಯೋಕೆ ಆಗಲಿಲ್ಲ ಅಂತ ಎಸ್ಟ್ ಬೇಜಾರ್ ಮಾಡ್ಕೊಂಡ್ಲು ಗೊತ್ತ ..ಹೆಚ್ಚು ಕಮ್ಮಿ ಮೂವರ ಮನೆಯಲ್ಲೂ ಹೇಳಿದ ಮಾತಿದು ..ಪೇಲವ ನಗೆ ನಕ್ಕಿದ್ದೆ..ಮುಂದೆ ಎಲ್ಲಿ ಹ್ಯಾಗೆ ಎಷ್ಟು ಓದ್ತೀನಿ ಅಂತ ಗೊತ್ತಿಲ್ಲದವಳು ಏನು ಅಡ್ರೆಸ್ ಕೊಟ್ಟಿರಬೇಕಿತ್ತು?ನಿಮ್ಮೆಲ್ಲರ ಮದುವೆ ಆಲ್ಬಮ್ ನೋಡ್ಲಿಕ್ಕೆ ಸಿಕ್ಕಿದ್ದಷ್ಟೇ ಪುಣ್ಯ !ಹಾಗೆ ವಾಪಾಸ್ ಬರೋವಾಗ ಶಾಲೆಯ ಬಳಿ ಹೋಗಿದ್ದೆ..ಸಡನ್ ಆಗಿ “ಮೈ ಆಟೋಗ್ರಾಫ್ ” ಸಿನೆಮಾ ನೆನಪಾಗಿತ್ತು .ಎಡ ಬದಿಯಲ್ಲಿ ವನ ಮಹೋತ್ಸವ ದ ದಿನ ನೆಟ್ಟ ಹೆಸರು ಗೊತ್ತಿಲ್ಲದ ಗಿಡ ಅಷ್ಟೆತ್ತರಕ್ಕೆ ಬೆಳೆದಿತ್ತು.ಬೆಳಿಗ್ಗೆ ಬೇಗ ಹೋಗಿ ಸರದಿಯ ಪ್ರಕಾರ ಗಿಡಗಳಿಗೆ ನೀರು ಹಾಕಿದ್ದು,ಗಾಳಿ ಮರದ ಕೆಳಗೆ ಸಾಲಾಗಿ ಕುಳಿತು ಓದಿದ್ದು . ಯಾವುದಾದರೂ ಸರ್ ಬರದಿದ್ದಾಗ ಖುಷಿಯಿಂದ ಆಫಿಸ್ ರೂಮ್ನಿಂದ ಓಡಿಬಂದು ಕ್ಲಾಸಿಗೆಲ್ಲ ಕಿರುಚಿ ಹೇಳಿದ್ದು, ..ನೆನಪಿಸಿಕೊಂಡಷ್ಟೂ …..ಆಟದ ಮೈದಾನದ ಪಕ್ಕದಲ್ಲಿದ್ದ ಬಾವಿಯನ್ನೊಮ್ಮೆ ಇಣುಕಿ ನೋಡಿದಾಗ ಏನೋ ತಳಮಳ !ಅದ್ಯಾಕೆ ಕಣ್ಣಲ್ಲಿ ನೀರು ?ಪಕ್ಕದಲ್ಲಿ ರಸ್ತೆಗೆ ಡಾಂಬರು ಹಾಕುತ್ತಿದ್ದವರಿಗೆನೋ ಅನುಮಾನ!ಮತ್ತೆ ಸರಿಯೆನಿಸದೆ ವಾಪಸ್ಸಾಗ ಹೊರಟವಳು ನಿಂತು ಬಿಟ್ಟೆ .ಕೊನೆಯ ಪರೀಕ್ಷೆಯ ದಿನ ಹಿಂದಿದ್ದ ಮಾವಿನ ಮರ ಹತ್ತಿ ಹೊಸ ಟೊಂಗೆಯೊಂದಕ್ಕೆ ನಮ್ಮ ನಾಲ್ವರ ಬಳೆಗಳನ್ನು ಹಾಕಿ ಬಂದಿದ್ದೆವಲ್ಲ ಪ್ರತೀ ವರ್ಷ ಇದೇ ಮಾರ್ಚ್ ನಲ್ಲಿ ಬಂದು ನೋಡೋಣ ಅಂತ,,,ಓಡಿಬಂದು ನೋಡಿದ್ದೆ.ಅರೇ..ಅಲೆಲ್ಲಿತ್ತು ಮರ ?ಅಲ್ಲೊಂದು ಮರವಿದ್ದಿದ್ದೆ ಸುಳ್ಳು ಅನ್ನೋ ಹಾಗೆ ಸಮತಟ್ಟಾದ ನೆಲ .ಪಕ್ಕದಲ್ಲಿ ದೊಡ್ಡ ಟವರ್!ನೀವೆಲ್ಲಾ ಹೋಗಿ ನೋಡಿ ನನ್ನ ತುಂಬಾ ನೆನಪಿಸಿಕೊಂಡಿರಬಹುದಲ್ಲಾ?!ಎಲ್ಲಿ ಹೋದ್ರಿ ನೀವೆಲ್ಲಾ..ಆ ಮರದಡಿ ಬಿದ್ದ ಮಿಡಿ ಗಾಯಿಗಳನ್ನು ಕಾಗೆ ಎಂಜಲು ಮಾಡಿ ತಿಂದ ದಿನಗಳೆಲ್ಲಿ ಹೋಯ್ತು.ಗುಡ್ಡದ ಹಿಂದೆ ಹೋಗಿ ಕಲ್ಲುಗಳನ್ನು ಒಲೆಯಂತಿರಿಸಿ ಮನೆಯಿಂದ ಕದ್ದು ತಂದ ಬೆಲ್ಲವನ್ನು ಪುಟ್ಟ ಪಾತ್ರೆಯಲ್ಲಿ ಬಿಸಿ ಮಾಡಿ ತಿನ್ನುತಿದ್ದ ನಮ್ಮ ನಾಲ್ವರಲ್ಲಿ ನಾನು ಮಾತ್ರ ಯಾಕೆ ಬೇರಾದೆ ..ಯಾಕಿಷ್ಟು ಬದಲಾದೆ?!ಬಿದ್ದ ಹಣ್ಣು ತಿನ್ನೋದ್ಯಾಕೆ ಅಂತ ಎತ್ತರದ ಗೇರು ಮರ ಹತ್ತಿ ಹಣ್ಣನ್ನು ಅಲ್ಲೇ ಕೂತು ತಿಂದು ಇಳಿದಾಗ ಅಂಗಡಿಯ ಅಜ್ಜ ಎಂಥ ಗಂಡು ಬೀರಿ ಇವಳು ಅಂದಾಗ ಕಣ್ಣಲ್ಲಿ ನೀರು ತರಿಸಿಕೊಂಡು ಓಡಿದವಳು ಇಂದು ತಪ್ಪು ಮಾಡಿ ಅದನ್ನೇ ಸಮಜಾಯಿಸಿಕೊಂಡು ಇದು ನನ್ನ “attitude” ಅನ್ನೋ ಹೆಸರು ಕೊಡ್ತೀನಿ .ಭಾಷೆ ,ದೇಶ ಅಂತ ಭಾಷಣ ಬಿಗಿತಿದ್ದವಳು ಇಂದು ಯಾವುದೋ ದೇಶದ ಅಕೌಂಟ್ಸ್ ನೋಡ್ತೀನಿ.ಸ್ವಲ್ಪ ಬದುಕು ಬದಲಾಯಿಸಿದ್ದು,,ಉಳಿದದ್ದು ನಾನೇ ಬದಲಾಯಿಸಿಕೊಂಡಿದ್ದು ..ಹ್ಮ್…..ನಿಮ್ಮನ್ನೂ ಬದುಕು ಈಗ ಯಾವ್ಯಾವ ಗೊಂದಲದಲ್ಲಿ ಇರಿಸಿದೆಯೋ.. ಆಗೆಲ್ಲಾ ಆಡಿದ ಆಟ, ಮಾಡಿದ ತುಂಟತನಗಳನ್ನು ನೆನಪಿಸಿಕೊಂಡರೆ ಅವ್ಯಕ್ತ ವೇದನೆಯಾಗುತ್ತೆ, ಆ ಕಾಲ ಇನ್ನೆಂದೂ ಬರದಲ್ಲ ಅಂತ ನೆನಪಾಗಿ …ಒಮ್ಮೊಮ್ಮೆ ಅನ್ನಿಸುತ್ತೆ ನಾವೆಲ್ಲಾ ಸ್ನೇಹದ ನೆರಳಲ್ಲಿ ಒಂದಾಗಿ ಇರಲೇಬಾರದಿತ್ತೆಂದು.ನೆನಪಿಸಿಕೊಂಡು ಪ್ರತೀ ಸಲ ಖಿನ್ನರಾಗೋ ಬದಲು ಆ ನೆನಪುಗಳೇ ಇಲ್ಲದಿರುತ್ತಿದ್ದರೆ??! ನಂಗೊತ್ತು ಈ ಬದುಕು ,ಕಾಲ ಅದೆಲ್ಲಿಯೂ ನಿಲ್ಲೋದಿಲ್ಲ ,ಸದಾ ನಮ್ಮತನಗಳ ವಿಸ್ತರಣೆಯೊಂದಿಗೆ,ಬೀಸುವ ಬಿರುಗಾಳಿಯಂತೆ. ಒಮ್ಮೊಮ್ಮೆ ಮೈ ಮನಸ್ಸು ಪಡೆದ ಗಾಯ, ನೋವುಗಳನ್ನು ಮರೆಸುವ ವೈದ್ಯನಂತೆ ಉರುಳುತ್ತಲೇ ಇರುತ್ತೆ,ಬದುಕ ಜಾತ್ರೆಯಲ್ಲಿ ಸ್ವಾರ್ಥಿಗಳಾಗುತ್ತ ಮುಂದೆ ಹೋಗುವ ತವಕದಲ್ಲಿ ಹಿಂದೆ ಕಳೆದುಕೊಂಡ ಆಟಿಕೆಗಳ ನೆನಪಿರೋದಿಲ್ಲ ನಮಗೆ ..ನೆನಪಾಗಿ ಹುಡುಕ ಹೊರಟರೆ ಅದು ಮತ್ತೆ ಸಿಗುವುದೂ ಇಲ್ಲ..ಆ ಕಾಲ ಮತ್ತೆ ಬರಲಿ ಅನ್ನಿಸಿದರೂ ಬದುಕಿನ ಜಂಜಾಟ ಬಿಡೋಲ್ಲ,ಯಾರಿಗೂ ಕಾಯದೆ ಚಲಿಸುತ್ತಲೇ ಇರುವ ಕಾಲವನ್ನು ಪುನಃ ತಿರುಗಿಸೋಕೂ ಆಗೋಲ್ಲ..ಆದರೂ ಮತ್ತೆ ಮತ್ತೆ ವ್ಯಥೆಯೆನ್ನಿಸುವುದುಇನ್ನು ಮುಂದೆ ನೀವೆಲ್ಲಾ ಒಂದು ನೆನಪು ಮಾತ್ರ ನನ್ನ ಪಾಲಿಗೆ ಎಂದು ನೆನಪಾದಾಗ !

youth attacks rajesh talwar




ನಿನ್ನೆ NDTV ನ್ಯೂಸ್ ನೋಡ್ತಾ ಇದ್ದಂತೆ ನನ್ನ ಮನಸಿಗೆ ಸ್ವಲ್ಪ ಸಮಾಧಾನ ಕೊಟ್ಟ ವಿಷಯ ಅಂದರೆ youth attacks rajesh talwar ಎನ್ನುವ ಲೈನ್ ....ಅರುಷಿ ಕೊಲೆ ಪ್ರಕರಣದಲ್ಲಿ ಆರೋಪಿ ಹಾಗು ಅರುಷಿಯ ತಂದೆ ರಾಜೇಶ್ ತಲ್ವಾರ್ ಪ್ರಕರಣದಿಂದ ನುಣಿಚಿ ಕೊಂಡಿದ್ದವನಿಗೆ ಉತ್ಸವ್ ಶರ್ಮನಿಂದ ಗೂಸ ಬಿದ್ದಿತ್ತು ..ಕೊನೆಯ ಬಾರಿ ರುಚಿಕಾ ಲೈಂಗಿಕ ದೌರ್ಜನ್ಯ ಹಗರಣದಲ್ಲಿ ಆರೋಪಿಯಾಗಿದ್ದ ಹರಿಯಾಣದ ಪೋಲಿಸ್ ಮಹಾ ನಿರ್ದೇಶಕ ರಾಥೋಡನಿಗೂ ಸಹ ಅದೇ ಉತ್ಸವ್ ಶರ್ಮ ಹಲ್ಲೆ ನಡೆಸಿದ್ದ .....ನಮ್ಮಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಇಂಥ ಹತ್ತು ಹಲವು ಪ್ರಕರಣಗಳು ಮಾದ್ಯಮಗಳು ಬಯಲು ಮಾಡಿದರು ಆರೋಪಿ ಮಾತ್ರ ತನ್ನ ಅದಿಕಾರ ಮತ್ತು ಹಣ ಬಲದಿಂದ ಬಹು ಸುಲಬವಾಗಿ ಬಚಾವ ಆಗುತಿದ್ದಾನೆ ....ನಾವೆಲ್ಲರೂ ಮುಕ ಪ್ರೇಕ್ಷಕರಂತೆ ಅದನ್ನೆಲ್ಲಾ ನೋಡುತ್ತಾ ಚರ್ಚೆ ಮಾಡುತ್ತ ನಮ್ಮ ದಿನ ಸಾಗಿಸುತ್ತೇವೆ....ಇಂತವರ ದಬ್ಬಾಳಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತವೆ .....ದೇಶ,ರಾಜ್ಯ ,ಭಾಷೆ ಎನ್ನುತ್ತಾ ಮಾತಾಡಿ ಜನರನ್ನು ಬೇರೆ ಬೇರೆ ಗುಂಪಾಗಿ ಮಾಡಿ ಪ್ರಚಾರ ಗಿಟ್ಟಿಸುವ ಬಿಕನಾಸಿ ಹೋರಾಟಗಾರರು ನಮ್ಮಲ್ಲಿ ಬಿದಿಗೊಬ್ಬರಂತೆ ಇದ್ದಾರೆ ...ಮಾತೆತ್ತಿದರೆ ಧರ್ಮ,ಭಾಷೆ ಎನ್ನುತ್ತಾ ಸಾಗುವ ಇವರು ನಾವೆಲ್ಲ ಒಂದೇ ಎನ್ನುವ ಮಾತನ್ನ ಯಾಕೆ ಹೇಳುದಿಲ್ಲ ...ಪತ್ರಕರ್ತರು ಜನರ ನಡುವೆ ಪ್ರಚಾರ ಗಿಟ್ಟಿಸಲು ಹೋಗಿ ಅವರವರಲ್ಲಿ ಜಗಳ ಮಾಡಿಕೊಳ್ಳುತ್ತಿರುವ್ದು ಸಾಮಾನ್ಯವಾಗಿ ಬಿಟ್ಟಿದೆ .......ಹಿಂದಿನಿಂದ ರಾಜಕಾರಣಿಗಳಿಗೆ ಬೈದು ಅವರಿಗೆ ಛತ್ರಿ ಹಿಡಿದು ತಿರುಗುವ ನಮ್ಮ ಜನ ಯಾಕೆ ಇನ್ನೊಬ್ಬರಿಗೆ ಅನ್ಯಾಯವಗುದನ್ನು ನೋಡುತ್ತಾ ಸುಮ್ಮನಿರುತ್ತಾರೆ ... ನಿತ್ಯನಂದನಂತ ಕಳ್ಳರು ಇನ್ನು ನಮ್ಮ ನಡುವೆ ಮೆರಯೂತಿದ್ದರೆ ...ಭಗತ್ ಸಿಂಗ್ ಬೇಕು ಆದ್ರೆ ನಮ್ಮ ಮನೆಯಲ್ಲಿ ಹುಟ್ಟ ಆತ ಹುಟ್ಟಬಾರದು ಎನ್ನುವವರು ನಾವೆಲ್ಲ ...ಅನ್ಯಾಯವಾಗಿ ಒಂದು ಹುಡುಗಿಯ ಸಾವಿಗೆ ಕಾರಣವಾದ ರಾಥೋಡನಂತ ಕಳ್ಳರನ್ನು ನಾವು ಯಾಕೆ ಇನ್ನು ಬದುಕಲು ಬಿದುತಿದ್ದೇವೆ ಅನ್ನುವುದೇ ಕಾಡುತ್ತಿರುವ ಪ್ರಶ್ನೆ .........

ಸೋಮವಾರ, ಜನವರಿ 24, 2011

ಚಪ್ಪಲಿಯಿಂದ ಹೊಡೆದ ಚೆಲುವೆಯ ನೆನಪಿಗಾಗಿ


ಚಪ್ಪಲಿಯಿಂದ ಹೊಡೆದ ಚೆಲುವೆಯ ನೆನಪಿಗಾಗಿ
ಆ ಚೆಲುವನಿಂದು ಚಪ್ಪಲಿ ಅಂಗಡಿ ಇಟ್ಟಿದ್ದಾನೆ.............

ನನ್ನ ಕವಿತೆಯಲಿ ಅವಳ ಕತೆಯಿದೆ



ನನ್ನ ಕವಿತೆಯಲಿ ಅವಳ ಕತೆಯಿದೆ
ಮೊದಲ ಪ್ರೇಮದ ಸಿಹಿ ನೆನಪಿದೆ
ಕಡಲ ಅಬ್ಬರವ ಮೀರಿಸುವ
ಎದೆಯ ಬಡಿತದ ಸ್ವರವಿದೆ ...
ಅವಳ ಪ್ರೀತಿಯ ಚಿತ್ತಾರವಿದೆ
ಆ ಸಂಬಾಷಣೆಯ ಪ್ರತಿ ಪದವಿದೆ ...
ನನ್ನ ಕವಿತೆಯಲಿ ಅವಳ ಹೆಜ್ಜೆಯ ಗುರುತುಗಳಿವೆ
ಆ ನಗುವಿನ ಹತ್ತಾರು ಅಲೆಗಳಿವೆ
ಲೆಕ್ಕವೆ ಸಿಗದ ಸುಮದುರ ದಿನಗಳ ಹಾಡುಗಳಿವೆ ..........
ಸುಮದುರ ದಿನಗಳ ಹಾಡುಗಳಿವೆ ..........

ಮೂರೂ ದಿನಗಳ ಬದುಕಿದು .....


ಗೆಳತಿ ಮೌನವೆತಕೆ ನಿನಗೆ ?
ಮೂರೂ ದಿನಗಳ ಬದುಕಿದು
ಬಂದು ಹೋಗುವ ದಾರಿಯಲಿ
ಮತ್ತೆ ತಲೆಯೆತ್ತಿ ನಿಲ್ಲು ನಿ ...........
ಮತ್ತೊಂದು ಹೊಸ ಬೆಳಕು ನಿನ್ನ ಮುಂದಿದೆ ...
ಎತ್ತಲಿಂದಲೋ ಬಂದ ಅಮ್ಮ ತೆರಸಳ ಸಿಹಿ ನೆನಪಿದೆ ..........
ಕತ್ತಲಿಗೆ ಬೆಳಕಿಟ್ಟ ಇಂದಿರಾಳ ಆದರ್ಶವಿದೆ ....
ನಿನ್ನಂತೆ ಸೋತು ಗೆದ್ದವರ ಸಂಬ್ರಮದ ಹೊನಲಿದೆ ...............

ಭಾನುವಾರ, ಜನವರಿ 23, 2011




ಅವನು --- ...
ಓ ನನ್ನ ನಾರಿ ಮಣಿ
ನಾನಾಗ ಬೇಕು ನಿನ್ನ ಕಣ್ಮಣಿ ..............
ಅವಳು
ಅದಕ್ಕೇನು ನೀನಾಗು ನನ್ನ ಕಣ್ಮಣಿ........
ಆದರೆ ಕಟ್ಟು ಮೊದಲು ನನಗೆ ಕರಿಮಣಿ ...........




ಬೆಳಗಿನ ರುಚಿಯಾದ ಕಾಪಿಯ ಹಾಗೆ....................................................
ಇ ಜೀವನವೇ ಹೀಗೆ
ಬೆಳಗಿನ ರುಚಿಯಾದ ಕಾಪಿಯ ಹಾಗೆ.............
ಬಣ್ಣವಿಲ್ಲದ ನೀರಿನ ಪಾತ್ರ ನಾ ಮಾಡಬಲ್ಲೆ
ಬಿಳಿಯ ಹಾಲಿನ ಪಾತ್ರೆ ಅವಳಾಗಬಲ್ಲಳೆ............
ಸಿಹಿ ಮತ್ತಿಸ್ಟು ಕಾಪಿ ಪುಡಿಯಂತೆ ಮಕ್ಕಳದ್ರೆ ಸಾಕು.........
ಮುಂಜಾನೆಯ ಬಿಸಿ ಕಾಪಿ ನಾವಾಗಬಲ್ಲೆವು........... ..

ಚಿನ್ನ...... ................................................................
ಅವನು ಹೇಳಿದನು ಅವಳಿಗೆ ನೀನೆ ನನ್ನ ಚಿನ್ನ......
ಕೊನೆಗೂ ಹಾಕಿದನು ಅವಳ ಕುತ್ತಿಗೆಗೆ ಕನ್ನ.........

ಪಂಚರಂಗಿ .......................................................
ನನ್ನವಳು ಪಂಚರಂಗಿ
ಹಾಗಾಗಿ ನಾನು ಹಾಕಿದ್ದೇನೆ
ಹರಿದ ಅಂಗಿ ...............

ಪಂಚ್ಚರು .......................................................
ಗೆಳತಿ ನೀನಾದರೆ ಬೀರು
ನಾನಾಗುವೆ ಬಾರು ...........
ನಾನಾದರೆ ಕಾರು
ನಿನಾಗದಿರು ಪಂಚ್ಚರು .............

ಕಂಬಳ .....................................................................
ಗೆಳತಿ ನೋಡಿ ಬರುವ ನಮ್ಮೂರ ಕಂಬಳ
ಕೈಯಲ್ಲಿ ಇದೆಯಲ್ಲ ಇ ತಿಂಗಳ ಸಂಬಳ


ಮಾಸ್ತರು ಹೇಳಿದ ಕತೆ ..........




ಬಹಳ ಹಿಂದಿನ ಮಾತು ಬರಗಾಲದ ಸಮಯ
ಅದೊಂದು ಸಣ್ಣ ಊರು ಅಲ್ಲೊಂದು ಬಡ ಹೆಂಗಸಿನ ಮನೆ ಇದ್ದಿತ್ತು ..ಅ ಮನೆಯಲ್ಲಿ ಪಾಪ ಅವರೊಬ್ಬರನ್ನು ಬಿಟ್ಟರೆ ಬೇರೆ ಯಾರು ಇರಲಿಲ್ಲ ..ಅದೇ ಊರಿನಲ್ಲಿ ಒಬ್ಬ ಬಿಕ್ಷುಕ ಇದ್ದಿದ್ದ ಅವನು ದಿನ ಬಿಕ್ಷೆ ಬೇಡಿ ಹೊಟ್ಟೆ ತುಂಬಿಸಿ ಕೊಳ್ಳುತಿದ್ದ ...ವಿಶೇಷ ಅಂದ್ರೆ ಆ ಊರಿನಲ್ಲಿ ಯಾರ ಮನೆಗೂ ಅತ ಬಿಕ್ಷೆಗೆ ಹೋದ್ರು ಅವನಿಗೆ ಬೈದು ಕಲ್ಸ್ತ ಇದ್ದರು..."ಹೆಯ ಹೋಗಪ್ಪ ನಮಗೆ ಊಟ ಮಾಡ್ಲಿಕ್ಕೆ ಇಲ್ಲ್ಲ ಇವ ಬೇರೆ " ಅಂತ ಗದರಿಸಿ ಅವನಿಗೆ ಬರಿ ಕೈಯಿಂದ ಕಳಿಸ್ತ ಇದ್ದರು .........ಪಾಪ ಆ ಹೆಂಗಸು ಮಾತ್ರ ಆಕೆಯ ಊಟದಲ್ಲಿ ಆತನಿಗೆ ಒಂದು ಪಾಲನ್ನು ದಿನ ಕೊಡುತ್ತ ಇದ್ದಳು ..ಸರಿ ಅವನು ಖುಷಿಯಿಂದ ಅಲ್ಲಿ ಊಟ ಮಾಡಿ ಹೋಗ್ತಾ ಇದ್ದ .....ಹೀಗೆ ಕಳಿತ ಇರಬೇಕಾದ್ರೆ ಒಂದು ದಿನ ಆ ಹೆಂಗಸು ಸಹ ಏನೋ ಕಾರಣದಿಂದ ಅಡುಗೆನ ಮಾಡಿರಲಿಲ್ಲ ಅವಳು ಸಹ ಉಪವಾಸ ಇದ್ದಿದ್ದಳು ಮಾಮೂಲಿಯಂತೆ ಬಿಕ್ಷುಕ ಅವಳ ಮನೆಗೆ ಬಂದು ಅಮ್ಮ ಬಿಕ್ಷೆ ಅಂತ ಕೂಗ ತೊಡಗಿದ ...ಪಾಪ ಅವಳು ಎಲ್ಲಿಂದ ಬಿಕ್ಷೆ ಕೊಡೋದು "ಇವತ್ತು ಬಿಕ್ಷೆ ಇಲ್ಲಪ್ಪ ನಾನು ಸಹ ಉಪವಾಸ ಇದ್ದೀನಿ " ಅಂತ ಹೇಳಿ ಅವನ ಬಗ್ಗೆ ಕರುಣಾಬಾವದಿಂದ ನೋಡಿದಳು ..ಅದಕ್ಕೆ ಬಿಕ್ಷುಕ ಸಿಟ್ಟಿನಿಂದ ಅವಳನ್ನು ನೋಡಿ" ಇ ರಾಂಡಿಗೆ ಇವತ್ತ ಏನಾಗಿದೆ ನಾನು ಬರ್ತೀನಿ ಅಂತ ಗೊತ್ತಿಲ್ವ " ಎಂದು ಅವಳಿಗೆ ಬೈಯುತ್ತ ಅಲ್ಲಿಂದ ಜಾಗ ಕಿತ್ತ ................
ಕೆಲವೊಂದು ಸಲ ಜನ ಹಿಂದಿನ ದಿನಗಳನ್ನು ಮರೆತು ಬಿಡುತ್ತಾರೆ ತಮಗೆ ಯಾವಾಗಲು ಸಹಾಯ ಮಾಡುವವರು ಒಮ್ಮೆ ಅವರು ಮಾಡಲು ಅಶಕ್ತರಾದೊಡನೆ ಅವರ ಮನಸ್ಸನ್ನು ನೋಯಿಸುತ್ತಾರೆ ....ತಮ್ಮನೂ ಪ್ರೀತಿಸಿದ ತಂದೆ ತಾಯಿಗಳನ್ನ ದ್ವೇಷಿಸುತ್ತಾರೆ ...

ಮಂಗಳವಾರ, ಜನವರಿ 18, 2011

ಕಣಿ ಹೇಳುವ ಹೆಂಗಸು ...........


ಸ್ವಲ್ಪ ಹಿಂದಿನ ಮಾತು ಆಗ ನಾನು ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದ ನಾನು ಊರ ನೆನಪಾದಾಗಲೆಲ್ಲ ಊರಿಗೆ ೩-೪ ತಿಂಗಳಿಗೊಮ್ಮೆ ಬಂದು ಹೋಗುತಿದ್ದೆ....ಸದಾ ಬಸ್ಸಿನಲ್ಲಿ ಪ್ರಯಾಣ ಮಾಡಿ ಬೇಜಾರಾದ ನಾನು ಅ ಸಲ ಟ್ರೈನಲ್ಲಿ ಟ್ರಾವೆಲ್ ಮಾಡಬೇಕೆಂದು ನಿರ್ದರಿಸಿ ಟ್ರೈನ್ ನಿಲ್ದಾಣದ ಕಡೆ ಹೆಜ್ಜೆ ಹಾಕಿದೆ ಒಂದು ಸಣ್ಣ ಬ್ಯಾಗ ಕೈಯಲ್ಲಿ ಬಿಟ್ಟರೆ ಬೇರೇನೂ ಲಗೇಜು ಇರಲಿಲ್ಲ ...ನಾನು ಮತ್ತು ನನ್ನ ಗೆಳೆಯರೆಲ್ಲ ತಿರುಪತಿಗೆ ಹೋದಾಗ ಟ್ರೈನಲ್ಲಿ ಹೋಗಿದ್ದೆವು ಹಾಗು ತುಂಬಾ ಖಷಿ ಪಟ್ಟಿದ್ದೆವು ...ಅದನ್ನು ಬಿಟ್ಟರೆ ನಾನು ಟ್ರೈನಲ್ಲಿ ಮತ್ತೆಂದು ಪ್ರಯಾಣ ಬೆಳಸಿರಲಿಲ್ಲ ...train ಸ್ಟೇಷನ್ ಗೆ ಹೋದ ಮೇಲೆ ತಿಳಿಯಿತು ಶಿವಮೊಗ್ಗದ ಟ್ರೈನ್ ಬರಲು ಇನ್ನು ಅರ್ದ ಗಂಟೆ ಕಾಯ ಬೇಕೆಂದು ...ಸರಿ ಇನ್ನೇನು ಮಾಡಲಿ ಟ್ರೈನ್ ದಾರಿಗಾಗಿ ಕಾಯ ತೊಡಗಿದೆ .....ನನ್ನ ಪಕ್ಕದಲ್ಲಿರುವ ಪ್ರಯಾಣಿಕರೊಬ್ಬರು ಮಾತನಾಡುತ್ತ ಇಲ್ಲಿ ಸೀಟ್ ಸಿಕ್ಕಿದರೆ ಅದೊಂದು ದೊಡ್ಡ ಸಾಹಸವೇ ಸರಿ ಅನ್ನುತಿದ್ದರು ಟ್ರೈನ್ ಬಂದೊಡನೆ ಎಲ್ಲರೂ ತಾ ಮುಂದೆ ನಾ ಮುಂದೆ ಎನ್ನುತ್ತಾ ಒಬ್ಬರ ಮೇಲೆ ಒಬ್ಬರ ಬಿಳುತ್ತ ಟ್ರೈನ್ ಹತ್ತ ತೊಡಗಿದರು ..ಅ ಜನ ಜಂಗುಳಿಯನ್ನು ನೋಡಿ ನನಗೆ ಸೀಟ್ ಸಿಕ್ಕಲ್ಲ ಅಂತ ಮನಸಲ್ಲೇ confirm ಮಾಡಿಕೊಂಡೆ .........ಸರಿ ಒಳಗೆ ಹೋಗಿ ನೋಡಿದರೆ ಸ್ವಲ್ಪ ಜನ ಕುಳಿತಿದ್ದರು ಸ್ವಲ್ಪ ಜನ ತನ್ನದೇ ಪ್ರಪಂಚ ಎನ್ನುವಂತೆ ಸಿಟಿನ ಉದ್ದಕ್ಕೂ ಕಾಲು ಚಾಚಿ ಮಲಗಿದ್ದರು ..ನನ್ನ ಪಕ್ಕದಲ್ಲಿ ನಿಂತಿದ್ದ ಹುಡುಗನೊಬ್ಬ ಮಲಗಿದ್ದ ಪ್ರಯಾಣಿಕನ ನಡುವೆ ಜಗಳ ಸಾಗಿತ್ತು "ಹೇಯ ಅದ್ಯಾಕಪ್ಪ ಮಲ್ಕೊಂಡಿದ್ದಿಯ ಎಲ್ಲರು ಸೇರಿ ಕುತ್ಕೊಳ್ಳ ಬಾರದ ಅಂತ ಅವನು ...." ಹೇಯಿ ಏನ ಮಡ್ಕೊಳ್ತಿಯೋ ಮಾಡ್ಕೋ ಸಿಟ ಕೊಡೋಲ್ಲ ಅಂತ ಅವನು " ಅವರಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಮೊದಲೇ ಟಿಕೆಟ್ reserv ಮಾಡಿದರೆ ಇಸ್ಟೆಲ್ಲಾ ಪೋಬ್ಲೆಮ್ ಆಗ್ತಾ ಇರಲಿಲ್ಲ ಅನ್ನುತ್ತ ನನಗೆ ನಾನೇ ಹಳಿದು ಕೊಂಡೆ .......
ಅಲ್ಲಿ ಹೀಗೆ ಗಿಜಿ ಗಿಜಿ ಮಾತನಾಡುವ ಪ್ರಯಾಣಿಕರನ್ನು ಹೊತ್ತ ರೈಲು ಯಶವಂತಪುರ ಸ್ಟೇಷನ್ ನಲ್ಲಿ ಮತ್ತಷ್ಟು ಜನರನ್ನು ತನ್ನ ಹೊಟ್ಟೆಯೊಳಗೆ ಸೇರಿಸಿತ್ತು ....ಆಗ ಆ ಬೋಗಿಯೊಳಗೆ ಒಬ್ಬಳು ದೇವರ(ದೇವಿಯ) ಮೂರ್ತಿ ಹೊತ್ತ ಕಣಿ ಹೇಳುವ ಹೆಂಗಸು ಬಂದಿದ್ದಳು ..ನಾವು ಚಿಕ್ಕವರಿದ್ದಾಗ ಮನೆ ಮನೆಗೆ ದೇವರ ಮೂರ್ತಿಯನ್ನು ಹೊತ್ತುಕೊಂಡು ಬರುತಿದ್ದವರು ದೇವರ ಪ್ರಸಾದ ಕೊಟ್ಟು ಕಾಣಿಕೆ ಪಡೆದು ಅದು ಇದು ಅಂತ ಕಣಿ ಹೇಳುತ್ತಾ ಸಾಗುತಿದ್ದರು...ಅವರು ದರಿಸುತಿದ್ದ ಮಣಿ ಸರ ಅವರ ಹೈರ್ ಸ್ಟೈಲ್ ಉತ್ತರ ಕನ್ನಡದ ಬಾಷೆ
ಅವರು ಮಾತನಾಡುವ ರೀತಿ ಎಲ್ಲವೂ ನಮಗೆ ಅವರಲ್ಲಿ ಆಸಕ್ತಿಯನ್ನು ಹುಟ್ಟು ಹಾಕುತಿತ್ತು ...ಅದೇನೇ ಇರಲಿ ಅವಳು ನಿಂತೇ ಇದ್ದಳು ಅದು ತಲೆಯ ಮೇಲೆ ಅ ಅಮ್ಮನವರ ದೇವರ ಮೂರ್ತಿಯನ್ನು ಹೊತ್ತು ಕೊಂಡೆ ನಿಂತಿದ್ದಳು ...ಯಾವೊಬ್ಬನು ಸಿಟಿನಿಂದ ಎದ್ದು ಬನ್ನಿ ಕುಳಿತು ಕೊಳ್ಳಿ ಎಂದು ಹೇಳಲೇ ಇಲ್ಲ ...ದೇವರೆಂದು ಕಂಡ ಕಂಡಲ್ಲಿ ಕೈ ಮುಗಿಯುವ ಜನ ಇವರೇನಾ ಅನ್ನಿಸಿತು ....ದೇವರಿಗೆ ಬೆಲೆ ಕೊಡದೆ ಇದ್ದಾರೆ ಪರವಾಗಿಲ್ಲ ಅ ಮೂರ್ತಿಯನ್ನು ಬಕ್ತಿಯಿಂದ ತಲೆಯ ಮೇಲೆ ಹೊತ್ತು ಒಂದು ರಾತ್ರಿ ಬೆಂಗಳೂರಿಂದ ಶಿವಮೊಗ್ಗಕ್ಕೆ ಪ್ರಯಾಣಿಸುವ ಆ ಹೆಂಗಸಿನ ಮುಖವನ್ನು ನನ್ನಿಂದ ನೋಡಲಾಗುತ್ತಿರಲಿಲ್ಲ ..ಅವಳಿಗೆ ಯಾರು ಅನುಕಂಪ ತೋರಲೇ ಇಲ್ಲ ...... ಸಿಟಿನ ಮೇಲೆ ಕಾಲು ಚಾಚಿ ಮಲಗಿದ್ದವನನ್ನು ನೋಡಿ ಸಿಟ್ಟು ಬಂತಾದರೂ ಅವನೊಡನೆ ಜಗಳವಾಡಿ ಪ್ರಯಜನವಿಲ್ಲ ..ಕೆಸರ ಮೇಲೆ ಕಲ್ಲು ಹಾಕಿದ ಹಗೆ ಆಗುತಿತ್ತು .....ದೇವರು ಅದು ಇದು ಎನ್ನುವ ಜನ ಮಾನವಿತೆಯನ್ನು ಯಾಕೆ ಮರಯೂತ್ತಾರೆ ?..ಬಹುಶ ಅ ಒಂದು ನಂಬಿಕೆಯಿನದಲೇ ಆಕೆ ಕೊನೆಯ ತನಕ ಯಾವುದೇ ಆತಂಕವಿಲ್ಲದೆ ಮೂರ್ತಿಯನ್ನು ಹೊತ್ತುಕೊಂಡಿದ್ದಳು ...ಅವಳ ನಂಬಿಕೆ ಏಕಾಗ್ರತೆಗೆ ನಾನು ಸೋತು ಹೋದೆ .......ಮತ್ತೆ ನೋಡುತಿದ್ದಂತೆ ಶಿವಮೊಗ್ಗ ಬಂದೆ ಬಿಟ್ಟಿತು...ಮತ್ತವಳ ಮುಖದಲ್ಲಿ ನಗುವಿತ್ತು ದೇವರಿಗೆ ಅಲ್ಲಿನ ಪರಿಸರದಲ್ಲಿ ಸ್ವಾಗತವಿತ್ತು ....ನನಗೆ ಆ ರೈಲು ಪ್ರಯಾಣ ಸಾಕಾಗಿತ್ತು