ಪುಟಗಳು

ಶನಿವಾರ, ಜುಲೈ 21, 2012

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ (ಚ್.ಕೆ.ಸತ್ಯಪ್ರಕಾಶ್)

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ

ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿ


ಭತ್ತ ಮಾತ್ರ ತೆಗೆದಿರುವ ಕೆಂಪು ಅಕ್ಕಿಯನ್ನೇ ಯಾವಾಗಲೂ ಊಟಕ್ಕೆ ಉಪಯೋಗಿಸಿ ಆನಂದವನ್ನು ಪಡೆಯಿರಿ. ಈ ಅಕ್ಕಿಗೆ ಆಡು ಭಾಷೆಯಲ್ಲಿ ಕೆಂಪು ಮುಂಡಗ ಅಕ್ಕಿ ಅಥವಾ ಕಜ್ಜಾಯ ಅಕ್ಕಿ ಎಂದೂ ಕರೆಯುತ್ತಾರೆ. ಈ ಅಕ್ಕಿಯಲ್ಲಿ ಬೇಕಾದಷ್ಟು ಪೌಷ್ಟಿಕಾಂಶಗಳು ಇವೆ. ಹೊರಗಡೆ ಯಾವುದೇ ಅಂಗಡಿಯಲ್ಲಿ ಇದು ದೊರಕುವಂತಾದ್ದಲ್ಲ. ಕೋಟಿ ರೂಪಾಯಿಗಳನ್ನು ಕೊಟ್ಟರೂ ಸಿಗುವುದಿಲ್ಲ. ಊಟ ಮಾಡುತ್ತಿರುವಾಗಲೇ ಈ ಪೌಷ್ಟಿಕಾಂಶಗಳು ದೇಹದಲ್ಲಿರುವ ಎಲ್ಲ ಕಸಕಡ್ಡಿಗಳನ್ನೂ, ಅತಿಯಾದ ವಾತ ಪಿತ್ತ ಕಫಗಳನ್ನೂ, ಯಾವುದೇ ರೀತಿಯ ಬೆನ್ನುನೋವು, ತಲೆನೋವು, ಸೊಂಟನೋವು, ಕಾಲುನೋವು, ತಲೆಭಾರ, ನಿದ್ರೆ ಸರಿಯಾಗಿ ಬಾರದಿರುವುದು, ಕೊಲೆಸ್ಟರಾಲನ್ನು ಪೂರ್ತಿಯಾಗಿ ಕರಗಿಸುವುದು. ಮುಂದೆ ಎಂದೆಂದಿಗೂ ಕೊಲೆಸ್ಟರಾಲ್ ದೇಹದಲ್ಲಿ ಸೇರಲು ಅವಕಾಶ ಕೊಡುವುದಿಲ್ಲ, ಬ್ಲಡ್ ಶುಗರನ್ನು ೧೦೦ ಕ್ಕೆ ೧೦೦ ರಷ್ಟು ಕಡಿಮೆಮಾಡುವುದು. ಇದನ್ನೆಲ್ಲ ವಿಜ್ನಾನಿಗಳು ದೃಡಪಡಿಸಿದ್ದಾರೆ. ಮನೆಯಲ್ಲಿ ಪಿ.ಸಿ. ಇದ್ದು ಇಂಟರ್ನೆಟ್ ಹಾಕಿಸಿಕೊಂಡಿರುವವರು ಗೂಗಲ್ ನಲ್ಲಿ ಜಾಲಾಡಿನೋಡಿ. ಈ ಕಜ್ಜಾಯ ಅಕ್ಕಿಗೆ ೧೦೦ ಕ್ಕೆ ೧೦೦ ರಷ್ಟು ಕ್ಯಾನ್ಸರ್ ವಾಸಿಮಾಡುವ ಶಕ್ತಿ ಇದೆ.


ಇದಲ್ಲದೆ ಆಸಿಡಿಟಿ, ಗ್ಯಾಸ್ಟ್ರೈಟಿಸ್, ಬೊಜ್ಜು ಈ ಎಲ್ಲವೂ ೧೦೦% ವಾಸಿಯಾಗುತ್ತದೆ. ಇದಲ್ಲದೇ ಮುಖವೂ ಕಾಂತಿಯುಕ್ತವಾಗುತ್ತದೆ. ಕಣ್ಣುಗಳು ಮಿನುಗುತ್ತವೆ. ಚಟುವಟಿಕೆ ಜಾಸ್ತಿಯಾಗುತ್ತದೆ. ಊಟ ಮಾಡಿದ ತಕ್ಷಣ ಹೊಟ್ಟೆ ಭಾರವಾಗುವುದಿಲ್ಲ. ಬ್ಲೋಟಿಂಗ್ ಅನುಭವ ಇರುವುದಿಲ್ಲ. ಹೊಟ್ಟೆಯಲ್ಲಿ ಸಂಕಟವಾಗುವುದೂ ನಿಂತುಹೋಗುತ್ತದೆ. ಹೊಟ್ಟೆ ಯಾವಾಗಲೂ ತಂಪಾಗಿರುತ್ತದೆ. ಮಲಬದ್ದತೆ ನಿರ್ನಾಮವಾಗಿ ದೊಡ್ಡಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೋಗುತ್ತದೆ. ಮಲವಿಸರ್ಜನೆಯ ಬಳಿಕ ದೇಹ ಮತ್ತು ಮನಸ್ಸು ಆನಂದಮಯವಾಗುತ್ತದೆ. ಪ್ರತಿದಿನ ಮಲವಿಸರ್ಜನೆಯ ನಂತರ ದೇಹ ಮತ್ತು ಮನಸ್ಸು ಹಗುರವಾಗಿ ಚಟುವಟಿಕೆಯಿಂದ ಕೂಡಿರುತ್ತದೆ. ಕೆಂಪು ಅಕ್ಕಿಯಲ್ಲಿರುವ ಅತ್ಯಂತ ಶಕ್ತಿ ಬೇರೆ ಯಾವುದೇ ಇಲ್ಲ ಎಂದು ಕಾಣಿಸುತ್ತದೆ. ಎಲ್ಲ ಧಾನ್ಯಗಳಿಗೂ ತನ್ನದೇ ಆದ ಶಕ್ತಿ ಇರುತ್ತದೆ. ಎಲ್ಲಾ ಕಾಲಕ್ಕೂ ಹೊಟ್ಟಿನಿಂದ ಕೂಡಿದ ಕೆಂಪು ಅಕ್ಕಿಯೇ ಸರ್ವಶ್ರೇಷ್ಟ ವಾದುದು.


ಬರೆದವರು : ಹೆಚ್.ಕೆ.ಸತ್ಯಪ್ರಕಾಶ್
೯೮೮೬೩ ೩೪೬೬೭

From -http://healthsp1939.blogspot.com/ (ಸತ್ಯ ಹನಸೋಗೆ )


ಹೊಟ್ಟು(ಫೈಬರ್)

ಹೊಟ್ಟು(ಫೈಬರ್)(ಭಾಗ-೧)


ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ ಹಾಲಿ ಸಿಕ್ಕುತ್ತಿರುವುದೆಲ್ಲಾ ಆ ಕವಚ ತೆಗೆದಿರುವ ಅಕ್ಕಿಯೇ. ಆ ಕವಚಕ್ಕೆ ಇಂಗ್ಲೀಷಿನಲ್ಲಿ ಕರ್ನಲ್ ಎಂದೂ ಕರೆಯುತ್ತಾರೆ. ಹೊಟ್ಟು ತಿನ್ನುವವರು ೧೦೦ ರಿಂದ ೧೨೦ ವರ್ಷಗಳವರೆಗೂ ಯಾವುದೇ ರೋಗ ರುಜಿನಗಳಿಲ್ಲದೆ ಸಂತೋಷವಾಗಿ ಬಾಳಬಹುದು. ಎಲ್ಲಾ ಧಾನ್ಯಗಳಲ್ಲೂ ಹೊಟ್ಟು ಇರುತ್ತದೆ. ಹೊಟ್ಟು ದೇಹಕ್ಕೆ ಬಹಳ ಅತ್ಯಗತ್ಯ ವಸ್ತುವಾಗಿರುತ್ತದೆ. ಈ ಹೊಟ್ಟಿನಲ್ಲಿ ಬೇಕಾದಷ್ಟು ಪೌಷ್ಟಿಕಾಂಶ ಇರುತ್ತದೆ. ಹೊರಗಡೆ ಯಾವುದೇ ಔಷಧಿಗಳಲ್ಲಿ ಅಥವಾ ಲೇಹಗಳಲ್ಲಿ ಸಿಗದೇಇರುವ ಪೌಷ್ಟಿಕಾಂಶಗಳು ಈ ಹೊಟ್ಟಿನಲ್ಲಿ ಇರುತ್ತವೆ. ಕೆಂಪು ಅಕ್ಕಿಯ ಹೊಟ್ಟೇ ಅತ್ಯಂತ ಶಕ್ತಿದಾಯಕ ಮತು ತಂಪುಕಾರಕ ಗುಣವನ್ನು ಹೊಂದಿರುವಂಥಾದ್ದು. ಕೆಂಪು ಅಕ್ಕಿಯ ಹೊಟ್ಟಿನಲ್ಲಿ ರೈಸ್ ಬ್ರಾನ್ ಆಯಿಲ್ ತಯಾರುಮಾಡುತ್ತಾರೆ. ಇದಕ್ಕೆ ಹಾರ್ಟ್ ಆಯಿಲ್ ಎಂದೂ ಕರೆಯುತ್ತಾರೆ. ಇದನ್ನು ದೇಶವಿದೇಶಗಳಲ್ಲಿ ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ಡಾಕ್ಟರರು ಶಿಫಾರಸು ಮಾಡುತ್ತಾರೆ. ಗೋಧಿಯ ಹೊಟ್ಟು ಉಷ್ಣವನ್ನುಂಟು ಮಾಡುತ್ತದೆ. ಕೆಂಪು ಅಕ್ಕಿ ಮತ್ತು ರಾಗಿ ಮಾತ್ರ ದೇಹಕ್ಕೆ ತಂಪನ್ನು ಉಂಟುಮಾಡುತ್ತದೆ ಮತ್ತು ಇಡೀ ದಿನ ದೇಹ ಮತ್ತು ಮನಸ್ಸನ್ನು ಚುರುಕಾಗಿಟ್ಟಿರುತ್ತದೆ. ಕೆಂಪು ಅಕ್ಕಿ, ಗೋಧಿ, ರಾಗಿ ಮತ್ತು ಎಲ್ಲ ಧಾನ್ಯಗಳಲ್ಲಿ ಈ ಹೊಟ್ಟು ಬೇಕಾದಷ್ಟು ಇರುತ್ತದೆ. ನೀವು ಎಷ್ಟು ಸಲ ತಿಂಡಿ, ಊಟ ಮಾಡುತ್ತೀರೋ ಅಷ್ಟು ಸಲವೂ ಹೊಟ್ಟಿನಿಂದ ಕೂಡಿದ ಆಹಾರವನ್ನೇ ತಿನ್ನಿ. ಇದು ನಿಮ್ಮನ್ನು ೧೦೦ ಕ್ಕೆ ೧೦೦ ರಷ್ಟು ಆರೋಗ್ಯವನ್ನು ಕೊಡುತ್ತದೆ. ಇಡೀ ದಿನ ದೇಹ ಮತ್ತು ಮನಸ್ಸು ಉಲ್ಲಾಸಮಯವಾಗಿರುತ್ತದೆ. ಸ್ವಲ್ಪವೂ ಸಂಕಟವಾಗುವುದಿಲ್ಲ, ಗ್ಯಾಸ್ ಆಗುವುದಿಲ್ಲ, ಗ್ಯಾಸ್ಟ್ರ್‍ಐಟಿಸ್ ಆಗುವುದಿಲ್ಲ, ಹೊಟ್ಟೆ ಭಾರವಾಗುವುದಿಲ್ಲ, ಹೊಟ್ಟೆಯು ಮಲ್ಲಿಗೆ ಹೂವಿನಂತಿರುತ್ತದೆ, ರಾತ್ರಿ ಹೊತ್ತು ಚೆನ್ನಾಗಿ ನಿದ್ರೆ ಬರುತ್ತದೆ, ಮಲಬದ್ಧತೆಯ ಸುಳಿವೇ ಇರುವುದಿಲ್ಲ, ಕರುಳಿನಲ್ಲಿ ಕಟ್ಟಿಕೊಂಡಿರುವ ಅತ್ಯಂತ ಕಟ್ಟಕಡೆ ಪಾಚಿಯೂ ಸಹ ಕೊಚ್ಚಿಕೊಂಡು ಹೊರಟುಹೋಗುತ್ತದೆ. ಮಲವಿಸರ್ಜನೆಯ ನಂತರ ಮನಸ್ಸು ಆನಂದಮಯವಾಗುತ್ತದೆ.


ಹೊಟ್ಟು(ಬ್ರಾನ್)-ಭಾಗ-೨
ಹೊಟ್ಟು (ಬ್ರಾನ್ ಅಥವ ಕರ್ನಲ್) ಇರುವ ಕೆಂಪು ಅಕ್ಕಿ ಸಿಗದೇಇದ್ದಲ್ಲಿ ಫುಡ್ ವರ್ಲ್ಡ್ ಅಥವಾ ದೊಡ್ಡ ಡಿಪಾರ್ಟ್ ಮೆಂಟ್ ಸ್ಟೋರ್ಸ್ ಗಳಲ್ಲಿ ಸಿಗುವ ಸೀರಿಯಲ್(ಧಾನ್ಯಗಳ) ಮತ್ತು ಗೋಧಿಯ ಹೊಟ್ಟು ಸಿಗುತ್ತದೆ. ಇದನ್ನು ಪ್ರತಿದಿನದ ತಿಂಡಿ, ಊಟಗಳ ಜೊತೆಗೆ ಅಥವಾ ಊಟದ ನಂತರ ೩ ರಿಂದ ೬ ಟೀ ಚಮಚದವರೆಗೆ ನೀರಿನಲ್ಲಿ ಮಿಕ್ಸ್ ಮಾಡಿ ಕುಡಿದು ಮೇಲೆ ಒಂದು ದೊಡ್ಡ ಗ್ಲಾಸ್ ನೀರು ಕುಡಿಯಿರಿ. ಅದರ ಆನಂದವನ್ನು ಸ್ವಲ್ಪ ಹೊತ್ತಿನಮೇಲೆ ಅನುಭವಿಸಿರಿ. ಇದಲ್ಲದೆ ಜ್ಯೂಸ್, ಕುದಿಸಿದ ನೀರು, ಹಾಲು, ಮೊಸರು, ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಚಿತ್ರಾನ್ನ, ಪಾಯಸ, ಯಾವುದೇ ರೀತಿಯ ಭಾತ್ ಗಳು, ರಾಯತ ಇತ್ಯಾದಿಗಳಿಗೆ ಮಿಕ್ಸ್ ಮಾಡಿ ಉಪಯೋಗಿಸಿ. ಹೊಟ್ಟಿಲ್ಲದೆ ಒಂದು ತುತ್ತನ್ನೂ ತಿನ್ನಬೇಡಿ. ಹೊಟ್ಟು ಜೀವರಕ್ಷಕ ಔಷಧಿಯಾಗಿರುತ್ತದೆ, ಮಲಬದ್ಧತೆಗೆ ಒಳ್ಳೇ ಪ್ರಾಕೃತಿಕ ಆಹಾರ. ನಿಮ್ಮ ದೇಹದಲ್ಲಿರುವ ಎಲ್ಲ ತರಹದ ವಿಷಪದಾರ್ಥಗಳನ್ನು ಹೊಡೆದೋಡಿಸುತ್ತದೆ. ನಿಮ್ಮ ದೇಹಕ್ಕೆ ಅತ್ಯಧಿಕ ಶಕ್ತಿಯನ್ನೂ ಸಹಾ ಕೊಡುತ್ತದೆ. ಹೊಟ್ಟುಳ್ಳ ಪದಾರ್ಥಗಳನ್ನು ಸೇವಿಸುತ್ತಿದ್ದರೆ ಯಾವುದೇ ರೋಗವಿಲ್ಲದೇ ೧೦೦ ರಿಂದ ೧೨೦ ವರ್ಷ ಬಾಳಬಹುದು. ಈಗ ನಾನಾ ರೀತಿಯ ರೋಗ ರುಜಿನಗಳಿಂದ ನರಳುತ್ತಿರುವವರೂ ಸಹಾ ಇದರ ಉಪಯೋಗ ಪಡೆದು ಆರೋಗ್ಯವನ್ನು ಸಂಪಾದಿಸಬಹುದು. ಹೊಟ್ಟು "ಅತ್ಯಾಶ್ಚರ್ಯಕರ ಆಹಾರ", ಅತ್ಯಾಶ್ಚರ್ಯಕರ ಶಕ್ತಿವರ್ಧಕ", "ಅತ್ಯಾಶ್ಚರ್ಯಕರ ಔಷಧಿ", "ಅತ್ಯಾಶ್ಚರ್ಯಕರ ಮಲವಿಸರ್ಜಕ".
ಇಂಥ ಅಮೂಲ್ಯವಾದ ಹೊಟ್ಟನ್ನು ಪ್ರಾಕೃತಿಕವಾಗಿ ’ದೇವರು’ ಸಮಸ್ತ ಜನಕೋಟಿಗೆಲ್ಲಾ ಅರ್ಪಿಸಿದ್ದಾನೆ. ಇಂಥ ಹೊಟ್ಟನ್ನು ಸೇವಿಸಿ ಅತ್ಯಾನಂದವಾದ ಆರೋಗ್ಯವನ್ನು ಪಡೆಯಿರಿ. ದೇವರು ನಿಮಗೆಲ್ಲಾ ಬೇಗ ಒಳ್ಳೆಯದನ್ನು ಮಾಡಲೆಂದು ಹಾರೈಸುತ್ತೇನೆ.